ಕಾರ್ಕಳ: ಬಸ್ಸಿನಿಂದ ಬಿದ್ದು ವ್ಯಕ್ತಿ ಮೃತ್ಯು

ಕಾರ್ಕಳ ಡಿ.5 (ಉಡುಪಿ ಟೈಮ್ಸ್ ವರದಿ) : ಬಸ್ಸನ್ನು ಹತ್ತುತ್ತಿರುವಾಗಲೇ ಮುಂದಕ್ಕೆ ಚಲಾಯಿಸಿದ ಕಾರಣ ಪ್ರಯಾಣಿಕರೊಬ್ಬರು ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನದ ಬಸ್‌ ನಿಲ್ದಾಣದ ಬಳಿ ನಡೆದಿದೆ.

ಕೃಷ್ಣ ನಾಯಕ್‌ (70) ಮೃತಪಟ್ಟವರು

ಹಿರ್ಗಾನದ ಬಸ್‌ ನಿಲ್ದಾಣದ ಬಳಿ ಕೃಷ್ಣ ನಾಯಕ್‌ ಅವರು ನಿಲ್ಲಿಸಿದ್ದ ಬಸ್ಸನ್ನು ಹತ್ತುತ್ತಿರುವಾಗ ಬಸ್ಸಿನ ನಿರ್ವಾಹಕ ಜಯಪ್ರಕಾಶ್ ನಿರ್ಲಕ್ಷತನದಿಂದ ಬಸ್ಸನ್ನು ಮುಂದಕ್ಕೆ ಚಲಾಯಿಸಲು ಸೂಚನೆ ನೀಡಿದ್ದ ಕಾರಣ ಬಸ್ಸಿನ ಚಾಲಕ ನಿರ್ಲಕ್ಷತನದಿಂದ ವೇಗವಾಗಿ ಒಮ್ಮೆಲೇ ಹೆಬ್ರಿ ಕಡೆಗೆ ಬಸ್ಸನ್ನು ಚಲಾಯಿಸಿದ್ದಾನೆ. ಪರಿಣಾಮ ಕೃಷ್ಣ ನಾಯಕ್‌ ರವರು ರಸ್ತೆಗೆ ಬಿದ್ದಿದ್ದು, ಬಸ್ಸಿನ ಹಿಂಬದಿ ಚಕ್ರ ಕೃಷ್ಣ ನಾಯಕ್‌ ರವರ ಕಾಲಿನ ಮೇಲೆ ಹರಿದು ತೀವ್ರ ಸ್ವರೂಪದ ಗಾಯಗೊಂಡಿದ್ದರು. ಈ ವೇಳೆ ತಕ್ಷಣ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ಕೃಷ್ಣ ನಾಯಕ್‌ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಶಶಿಕಾಂತ್ ನಾಯಕ್ ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!