ಉಪ್ಪಿನಂಗಡಿ: ಜೀಪು ನಿಲ್ಲಿಸುತ್ತಿದ್ದಂತೆ ಹೃದಯಾಘಾತದಿಂದ ಚಾಲಕ ನಿಧನ

ಉಪ್ಪಿನಂಗಡಿ ಡಿ.5 :  ತಾವು ಚಲಾಯಿಸುತ್ತಿದ್ದ  ಜೀಪನ್ನು ನಿಲ್ಲಿಸುತ್ತಿದ್ದಂತೆ ಚಾಲಕರೊಬ್ಬರು ಹೃದಯಾಘಾತದಿಂದ ನಿಧನರಾಗಿರುವ ಘಟನೆ ಉಪ್ಪಿನಂಗಡಿಯ ಖಾಸಗಿ ನರ್ಸಿಂಗ್ ಹೋಂ ಬಳಿ ನಡೆದಿದೆ.

ಮೃತರನ್ನು ಕಡಬ ತಾಲೂಕಿನ ಕೊಯಿಲ ಗ್ರಾಮದ ಒಳಕಡಮ ನಿವಾಸಿ ವಿಶ್ವನಾಥ ಗೌಡ (50) ಎಂದು ಗುರುತಿಸಲಾಗಿದೆ.

ವಿಶ್ವನಾಥ ಗೌಡ ಅವರು ತಮ್ಮ ಜೀಪನ್ನು ದುರಸ್ತಿಗೊಳಪಡಿಸಿ ಹೊಸ ಬಣ್ಣ ಬಳಿದು ಅದರ ವಯರಿಂಗ್ ಬದಲಾಯಿಸಲು ಗ್ಯಾರೇಜೊಂದರಲ್ಲಿ ಮಾತುಕತೆ ನಡೆಸಿದ್ದರು. ಅನಂತರ ಜೀಪನ್ನು ಚಲಾಯಿಸುತ್ತಿದ್ದ ಅವರು ಉಪ್ಪಿನಂಗಡಿಯ ಖಾಸಗಿ ನರ್ಸಿಂಗ್ ಹೋಂ ಬಳಿ ತಮ್ಮ ಜೀಪನ್ನು ನಿಲ್ಲಿಸುತ್ತಿದ್ದಂತೆಯೇ ಹೃದಯ ಸ್ತಂಭನಕ್ಕೆ ತುತ್ತಾಗಿ ಜೀಪಿನಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!