ಮೊದಲು CM ಕಚೇರಿಗೆ ಲಂಚ ಕೊಡಬೇಡಿ’ ಎಂಬ ಬೋರ್ಡ್ ಹಾಕಿ : ಪ್ರಿಯಾಂಕ್ ಖರ್ಗೆ

ಬೆಂಗಳೂರು ಅ.29 : ಲಂಚ ಕೊಡಬೇಡಿ’ ಎಂಬ ಬೋರ್ಡ್ ಹಾಕೋದ್ರಿಂದ ಲಂಚ ನಿಲ್ಲುತೆ ಅಂದ್ರೆ, ಮೊದಲು ಸಿಎಂ ಕಚೇರಿಗೆ ಬೋರ್ಡ್ ಹಾಕಿಬಿಡಿ ಎಂದು ಕಾಂಗ್ರೆಸ್ ಶಾಸಕ, ಕೆಪಿಸಿಸಿ ಸಂವಹನ ವಿಭಾಗ್ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರು ವ್ಯಂಗ್ಯವಾಡಿದ್ದಾರೆ.

ಕಾಸಿಗಾಗಿ ಪೋಸ್ಟಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಂ.ಟಿ.ಬಿ. ನಾಗರಾಜ್ ನೀಡಿರುವ ಹೇಳಿಕೆ ಕುರಿತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು ಟ್ವೀಟ್ ಮಾಡಿ , ‘ಕೆಲವು ತಿಂಗಳ ಹಿಂದೆ ‘ನಾನು ಭ್ರಷ್ಟನಾಗಲಾರೆ, ನನಗೆ ಯಾರು ಲಂಚ ಕೊಡಬೇಡಿ’ ಎಂಬ ಬೋರ್ಡ್ ಸರ್ಕಾರಿ ಕಚೇರಿಗಳಲ್ಲಿ ಹಾಕಬೇಕು ಅಂತ ಮುಖ್ಯಮಂತ್ರಿ ಕಛೇರಿ ಆದೇಶಿಸಿತ್ತು. ಈಗ ಬಿಜೆಪಿ ಸಚಿವರ ಪ್ರಕಾರ ಇನ್ಸ್ ಪೆಕ್ಟರ್ ಹುದ್ದೆಗೆ ರೂ.80 ಲಕ್ಷ ಕೊಡಬೇಕಂತೆ. ಬೋರ್ಡ್ ಹಾಕೋದ್ರಿಂದ ಲಂಚ ನಿಲ್ಲುತೆ ಅಂದ್ರೆ, ಮೊದಲು ಅದನ್ನ ಸಿಎಂ ಕಛೇರಿ ಮತ್ತು ಸಚಿವರ ಕಚೇರಿಗೆ ಹಾಕಬೇಕಿದೆ’ ಎಂದು ಹೇಳಿದ್ದಾರೆ. 

ಹಾಗೂ ‘ಸರ್ಕಾರದ ಮಂತ್ರಿಗಳು ತಮ್ಮದೇ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವಾಗ ಮುಖ್ಯಮಂತ್ರಿಗಳು ಮೌನವಾಗುತ್ತಾರೆ. ಐಟಿ, ಇಡಿ ಈಗ ಎಲ್ಲಿ ಅಡಗಿವೆ ? ಎಂದು ಪ್ರಶ್ನಿಸಿದ್ದಾರೆ. 

ಮತ್ತೊಂದು ಟ್ವೀಟ್ ನಲ್ಲಿ ಎಂ.ಟಿ.ಬಿ. ನಾಗರಾಜ್ ಅವರ ಸಂಭಾಷಣೆಯನ್ನು ಗಮನಿಸಿದರೆ #PayCM ದರ ನಿಗದಿ ಮಾಡಿರುವುದು ಸ್ಪಷ್ಟವಾಗಿ ತೋರುತ್ತದೆ’ ಎಂದು ಬರೆದುಕೊಂಡಿದ್ದಾರೆ ಹಾಗೂ ಇದರಲ್ಲಿ ಎಂ.ಟಿ.ಬಿ. ನಾಗರಾಜ್ ಅವರ ಮಾತನಾಡುವ ವಿಡಿಯೋವನ್ನು ಕೂಡ ಅವರು ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!