ಯುವತಿಯ ಪ್ರೇಮ ಬಲೆಗೆ ಬಿದ್ದು ಸಾರ್ಜನಿಕರ ಕೋಟ್ಯಂತರ ರೂ. ಹಣ ವರ್ಗಾಯಿಸಿದ ಬ್ಯಾಂಕ್ ಮ್ಯಾನೇಜರ್ !

ಬೆಂಗಳೂರು ಜೂ.24: ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾದ ಯುವತಿಯ ಪ್ರೇಮದ ಬಲೆಗೆ ಬಿದ್ದ ಬ್ಯಾಂಕ್ ಮ್ಯಾನೇಜರ್ ಓರ್ವ ಸಾರ್ಜನಿಕರ ಹಣವನ್ನು ಆಕೆಯ ಖಾತೆಗೆ ವರ್ಗಾಯಿಸಿ ಸಿಕ್ಕಿಬಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿ ಹನುಮಂತನಗರದ ಇಂಡಿಯನ್ ಬ್ಯಾಂಕ್ ನ ವ್ಯವಸ್ಥಾಪಕ ಹರಿಶಂಕರ್, ಬ್ಯಾಂಕ್ ಸಹಾಯಕ ವ್ಯವಸ್ಥಾಪಕಿ ಹಾಗೂ ಓರ್ವ ಕ್ಲಕ್ ನನ್ನು ಬಂಧಿಸಲಾಗಿದೆ. ಠೇವಣಿದಾರರ ಹೆಸರಿನಲ್ಲಿ ಸಾಲ ಪಡೆದ ಬ್ಯಾಂಕ್ ವ್ಯವಸ್ಥಾಪಕ ಹರಿಶಂಕರ್, ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾದ ಯುವತಿಗೆ ಕೇವಲ 6 ದಿನದಲ್ಲಿ ಬರೋಬ್ಬರಿ 5.70 ಕೋಟಿ ರೂ. ಕೊಟ್ಟಿದ್ದಾನೆ.

ಇದೀಗ ಬ್ಯಾಂಕ್ ವ್ಯವಸ್ಥಾಪಕನ ಬಣ್ಣ ಬಯಲಾಗಿದ್ದು, ಆಂತರಿಕ ತನಿಖೆ ನಡೆಸಿದಾಗ ಗ್ರಾಹಕರ ಹೆಸರಿನಲ್ಲಿ ಸಾಲ ಪಡೆದಿರುವುದು ಗೊತ್ತಾಗಿದೆ. ಆದರೆ ಈತ ನಿಜವಾಗಿಯೂ ಡೇಟಿಂಗ್ ಆಪ್ ಗೆಳತಿಗೆ ಹಣ ಕಳಿಸಿ ಕೊಟ್ಟಿದ್ದನೇ ಅಥವಾ ಇನ್ನೇನಾದರೂ ಮಾಡಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!