ಉಡುಪಿ: ಸಿವಿಲ್ ಎಂಜಿನಿಯರ್ ಆ್ಯಂಡ್ ಸಕ್ಟರಲ್ ಡಿಸೈನರ್ ‘ಶ್ರೀವರಾಹ’ ಕಚೇರಿ ಉದ್ಘಾಟನೆ
ಉಡುಪಿ, ಜೂ.4: ಬನ್ನಂಜೆ ನಾರಾಯಣ ಗುರು ಸಂಕೀರ್ಣದಲ್ಲಿ ಸಿವಿಲ್ ಎಂಜಿನಿಯರ್ ಆ್ಯಂಡ್ ಸಕ್ಟರಲ್ ಡಿಸೈನರ್ ‘ಶ್ರೀ ವರಾಹ ಕಚೇರಿಯನ್ನು ಮಣಿಪಾಲ ಎಂಐಟಿ ಪಾಧ್ಯಾಪಕ ಡಾ| ನಾರಾಯಣ ಶೆಣೈ ಶುಕ್ರವಾರ ಉದ್ಘಾಟಿಸಿದರು.
ಯಾವುದೇ ಸಂಸ್ಥೆ ಯಶಸ್ವಿಯಾಗಬೇಕಾದರೆ ಶ್ರದ್ದೆ ಭಕ್ತಿ, ಹಿರಿಯರ ಆಶೀರ್ವಾದ ಪ್ರಾಮಾಣಿಕ ಪ್ರಯತ್ನ ಪರೋಪಕಾರಿ ಮನೋಭಾವದಿಂದ ಯಶಸ್ಸುಸಿಗಲಿದೆ. ಈಗಿನ ಯುವಕರು ಬುದ್ಧಿವಂತರು, ಪ್ರತಿಭಾನ್ವಿತರಾಗಿದ್ದು, ಸಮಯ ಪಾಲನೆಯೊಂದಿಗೆ ಸ್ಪಷ್ಟಗುರಿ ಇರಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು ಎಂದು ಅವರು ಸಲಹೆ ನೀಡಿದರು.
ಎಂಐಟಿ ಪ್ರಾಧ್ಯಾಪಕ ಡಾ| ಕಿರಣ್ ಕಾಮತ್, ಎ.ಜಿ. ಅಸೋಸಿಯೇಟ್ಸ್ನ ಎಂ. ಗೋಪಾಲ ಭಟ್, ವಕೀಲ ಕೆ.ಆರ್. ರಾಮಚಂದ್ರ ಅಡಿಗ, ಸಾಮಾಜಿಕ ಕಾರ್ಯಕರ್ತ ವಿಶುಶೆಟ್ಟಿ ಅಂಬಲಪಾಡಿ ಶುಭ ಹಾರೈಸಿದರು.
ಧರಣಿ ಅರ್ಥ್ ಮೂವರ್ನ ರಾಮಚಂದ್ರ ಆಚಾರ್ಯ, ಕೇದಾರನಾಥ ಕನ್ ಸ್ಟ್ರಕ್ಷನ್ ಮಾಲಕ ಕೆಮ್ತೂರು ಕೃಷ್ಣಮೂರ್ತಿ ಭಟ್, ಎಂಜಿನಿಯರ್ ಕೆಮ್ತೂರು ವೇಣುಗೋಪಾಲ ಭಟ್, ಆರ್ಕಿಟೆಕ್ಟ್ ರಮ್ಯಾ ಆರ್. ಆಚಾರ್ಯ ಉಪಸ್ಥಿತರಿದ್ದರು.