ಪಡುಬಿದ್ರಿ: ಹಾವು ಕಚ್ಚಿ ನಿವೃತ್ತ ಸೈನಿಕ‌ ಸಾವು

ಉಡುಪಿ: ಹಾವು ಕಚ್ಚಿದ ಪರಿಣಾಮ ನಿವೃತ್ತ ಸೈನಿಕರೋರ್ವರು ಮೃತಪಟ್ಟ ಘಟನೆ ಕಾಪು ತಾಲೂಕಿನ ಬಡಾ ಗ್ರಾಮದ ಭಾರತ್ ನಗರ ಎಂಬಲ್ಲಿ ಜೂನ್.1ರಂದು ರಾತ್ರಿ ನಡೆದಿದೆ.

ಮೃತರನ್ನು ಬಡಾ ಗ್ರಾಮದ ಭರತ್ ನಗರದ ನಿವಾಸಿ ಮಾಜಿ ಸೈನಿಕ‌ 62 ವರ್ಷದ ರಮೇಶ್ ಕೆ ಎಂದು ಗುರುತಿಸಲಾಗಿದೆ. ಇವರು ನಿನ್ನೆ ಸಂಜೆ ತಮ್ಮ ಮನೆಯ ಕಂಪೌಂಡ್ ಒಳಗೆ ತೆಂಗಿನ ಮರದಿಂದ ಬಿದ್ದ ಗರಿಗಳನ್ನು ಹೆಕ್ಕಲು ಹೋಗಿದ್ದ ವೇಳೆ ಬಲಕಾಲಿನ ಪಾದಕ್ಕೆ ವಿಷದ ಹಾವು ಕಚ್ಚಿತ್ತು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಉಡುಪಿಯ ಟಿ.ಎಂ.ಎ. ಪೈ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಯಲ್ಲಿದ್ದ ರಮೇಶ್ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ 9.20ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!