ಮೊಬೈಲ್ ಫೋನ್ ಒಡೆದು ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆಗೈದ ಬಾಲಕ

ನಾಗ್ಪುರ ಮಾ.24 (ಉಡುಪಿ ಟೈಮ್ಸ್ ವರದಿ): ಮೊಬೈಲ್ ಫೋನ್ ಒಡೆದು ಹಾಕಿದನೆಂಬ ಕಾರಣಕ್ಕೆ 31 ವರ್ಷದ ವ್ಯಕ್ತಿಯೊಬ್ಬನನ್ನು ಹದಿಹರೆಯದ ಹುಡುಗನೊಬ್ಬ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ನಡೆದಿದೆ.

ಕೂಲಿ ಕಾರ್ಮಿಕನಾಗಿದ್ದ ಸಾಲಿರಾಮ್ ಅಲಿಯಾಸ್ ರಿಂಕು ಕುಮಾರ್ (31) ಹತ್ಯೆಯಾದ ವ್ಯಕ್ತಿ. ಘಟನೆಗೆ ಸಂಬಂಧಿಸಿ ಹದಿಹರೆಯದ ಹುಡುಗನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.  ಹತ್ಯೆಯಾದ ವ್ಯಕ್ತಿ ಹಾಗೂ ಆರೋಪಿ ಮೂಲತಃ ಉತ್ತರ ಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆಯವರೆಂದು ತಿಳಿದು ಬಂದಿದೆ.

ತನ್ನ ಹಳ್ಳಿಯಲ್ಲಿರುವ  ಸಂಬಂಧಿಕರಿಗೆ ಫೋನ್ ಮಾಡಲು ರಿಂಕು ಕುಮಾರ್ ಹದಿಹರೆಯದ ಯುವಕನ ಬಳಿ ಮೊಬೈಲ್ ಫೋನ್ ಕೇಳಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ವಲ್ಪ ಸಮಯದ ನಂತರ ಕುಮಾರ್ ಹದಿಹರೆಯದವನ ಮೊಬೈಲ್ ಫೋನ್‌ನಿಂದ ತನ್ನೂರಿಗೆ ಕರೆ ಮಾಡಿದ್ದಾನೆ. ನಂತರ ಮೊಬೈಲ್  ಅನ್ನು ನೆಲಕ್ಕೆ ಬಡಿದು ಪುಡಿಗಟ್ಟಿದ್ದಾನೆ. ಇದರಿಂದ ಕೋಪಗೊಂಡ ಹದಿಹರೆಯದ ಹುಡುಗ ಕುಮಾರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಕುಮಾರ್ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!