ನಾಪತ್ತೆಯಾಗಿದ್ದ ಮುಕ್ಕ ನಿವಾಸಿ ಕಿರಣ್ ಶೆಟ್ಟಿ ಮೃತ ದೇಹ ಪತ್ತೆ
ಮಂಗಳೂರು, ಜು.20: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವ ಇಂದು ಸಸಿಹಿತ್ಲು ಬೀಚ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮುಕ್ಕ ನಿವಾಸಿ ಕಿರಣ್ ಶೆಟ್ಟಿ (42) ಮೃತಪಟ್ಟವರು. ಕಳೆದ ಒಂದು ವಾರದ ಹಿಂದೆ ಇವರು ನಾಪತ್ತೆಯಾಗಿದ್ದು ಇಂದು ಮುಂಜಾನೆ ಇವರ ಮೃತದೇಹ ಸಮುದ್ರತೀರದಲ್ಲಿ ತೇಲುತ್ತಿರುವುದು ಕಂಡು ಬಂದಿದೆ. ಬಳಿಕ ಹಳೆಯಂಗಡಿ ಪಂಚಾಯತ್ ಸದಸ್ಯರಾದ ಚಂದ್ರ ಕುಮಾರ್, ಅನಿಲ್, ಧನರಾಜ್ ಮತ್ತಿತರರ ಸಹಕಾರದಿಂದ ಮೃತದೇಹವನ್ನು ಮೇಲಕ್ಕೆತ್ತಲಾಯಿತು. ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅವಿವಾಹಿತರಾಗಿದ್ದ ಕಿರಣ್ ಶೆಟ್ಟಿ ಅವರು ಪಾಲುದಾರಿಕೆಯಲ್ಲಿ ಅಂಗಡಿ ನಡೆಸುತ್ತಿದ್ದರು. ಕೋವಿಡ್ ಕಾರಣದಿಂದ ವ್ಯಾಪಾರ ಇಲ್ಲದೆ ಹಣದ ಸಮಸ್ಯೆಯಿಂದ ಇದ್ದರು ಎಂದು ಕುಟುಂಬಸ್ಥರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.