ಕುಂದಾಪುರ: ವಕ್ವಾಡಿ ಬಸ್ ನಿಲ್ದಾಣ ಬಳಿ ಇಸ್ಪೀಟು ಜುಗಾರಿ ಅಡ್ಡೆಗೆ ದಾಳಿ- ನಾಲ್ವರ ಬಂಧನ
ಕುಂದಾಪುರ ಜು.6(ಉಡುಪಿ ಟೈಮ್ಸ್ ವರದಿ):ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದ ವಕ್ವಾಡಿ ಬಸ್ ನಿಲ್ದಾಣದ ಹಿಂಬದಿಯ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಇಸ್ಪೀಟು ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಟರಾಜ (35), ಹರೀಶ (32), ಅಶ್ರಫ್ (29), ಇಕ್ಬಾಲ್ ಅಹಮದ್ (48) ಪೊಲೀಸರು ವಶಕ್ಕೆ ಪಡೆದವರು.ಈ ಬಗ್ಗೆ ಮಾಹಿತಿ ಪಡೆದ ಕುಂದಾಪುರ ಠಾಣಾ ಪೊಲೀಸರು ಜು.2 ರಂದು ಸ್ಥಳಕ್ಕೆ ತೆರಳಿ ನೋಡಿದಾಗ ಕೆಲವರು ಹಣವನ್ನು ಪಣವಾಗಿ ಇಟ್ಟು ಇಸ್ಪೀಟು ಜುಗಾರಿ ಆಡುತ್ತಿದ್ದುದು ಕಂಡು ಬಂದಿದೆ.
ಈ ವೇಳೆ ನಾಲ್ವರನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಇದ್ದ ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ 3150 ರೂ.ನಗದು, 1 ಹಳೆಯ ದಿನಪತ್ರಿಕೆ, 52 ಇಸ್ಪೀಟು ಎಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.