ಗೋಪಾಲ ಭಂಡಾರಿ ವ್ಯಕ್ತಿತ್ವವೇ ನಮಗೆ ಶಕ್ತಿ: ಮಂಜುನಾಥ ಪೂಜಾರಿ
ಹೆಬ್ರಿ: ನಮ್ಮ ನಾಯಕರಾಗಿದ್ದ ಗೋಪಾಲ ಭಂಡಾರಿಯವರ ವ್ಯಕ್ತಿತ್ವವೇ ನಮಗೆಲ್ಲ ದೊಡ್ಡ ಶಕ್ತಿ, ಅವರು ನಮ್ಮೊಂದಿಗೆಯೇ ಇದ್ದಾರೆ ಎಂಬ ಭಾವನೆ ಮೂಡುತ್ತಿದೆ. ಈಗ ಕಾರ್ಕಳ ಕ್ಷೇತ್ರದಲ್ಲಿ ನಾವು ಮತ್ತೇ ಹಂತಹಂತವಾಗಿ ಕಾಂಗ್ರೆಸ್ ಪಕ್ಷವನ್ನು ಬಲಪಡಿ ಸುವ ಮೂಲಕ ಅವರ ಕನಸು ಈಡೇರಿಸಬೇಕಿದೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಹೆಬ್ರಿ ಕಾಂಗ್ರೆಸ್ ಸಮಿತಿ ವತಿಯಿಂದ ಅಧ್ಯಕ್ಷ ಎಚ್.ಬಿ.ಸುರೇಶ್ ನೇತ್ರತ್ವದಲ್ಲಿ ನಡೆದ ದ್ವಿತೀಯ ವರ್ಷದ ಪುಣ್ಯಸ್ಮರಣೆ ಭಾಗವಹಿಸಿ ಮಾತನಾಡಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಮಾತನಾಡಿ ಗೋಪಾಲ ಭಂಡಾರಿ ನಾಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು. ಗೋಪಾಲ ಭಂಡಾರಿ ಅಳಿಯ ಶ್ವೇತ ಕುಮಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್. ಜನಾರ್ಧನ್, ಕಾರ್ಯದರ್ಶಿ ಅಶ್ವಿನಿ ಮುದ್ರಾಡಿ,ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣ ನಾಯ್ಕ್, ಸಂತೋಷ ನಾಯಕ್ ಕನ್ಯಾನ, ಪಕ್ಷದ ವಿವಿಧ ಪ್ರಮುಖರಾದ ಶಶಿಕಲಾ ಡಿ.ಪೂಜಾರಿ, ಜಯಲಕ್ಷ್ಮಿ ಮುದ್ರಾಡಿ, ನಾಗರಾಜ ಭಂಡಾರಿ, ಸುಂದರ ಶಿರೂರ್, ಶಶಿಕಲಾ ಆರ್ ಪಿ, ಸುಧಾಕರ ಶೆಟ್ಟಿ ಬಲ್ಲೆಮನೆ, ದೇವಳಬೈಲು ಸುಧಾಕರ ಶೆಟ್ಟಿ, ಅಮರನಾಥ ಶೆಟ್ಟಿ, ಸುಂದರ ಪೂಜಾರಿ, ಗಣೇಶ್ ಶೇರಿಗಾರ್, ಶಂಕರ ಶೇರಿಗಾರ್, ರಾಜೇಶ ಪೂಜಾರಿ, ವಿಶು ಕುಮಾರ್, ಕರವೇ ಹೆಬ್ರಿ ಘಟಕದ ಅಧ್ಯಕ್ಷ ಸೀತಾನದಿ ವಿಜೇಂದ್ರ ಶೆಟ್ಟಿ, ಜೆಡಿಎಸ್ ಕಾರ್ಕಳ ಕ್ಷೇತ್ರಾಧ್ಯಕ್ಷ ಕುಚ್ಚೂರು ಶ್ರೀಕಾಂತ್ ಪೂಜಾರಿ,ಹೆಬ್ರಿ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಬಿ.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ಶಿವಪುರ: ಶಿವಪುರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಶ್ವನಾಥ ನಾಯಕ್ ನೇತ್ರತ್ವದಲ್ಲಿ ಭಾನುವಾರ ಕಾಂಗ್ರೆಸ್ ನಾಯಕರಾದ ಮಾಜಿ ಶಾಸಕ ದಿ.ಹೆಬ್ರಿ ಗೋಪಾಲ ಭಂಡಾರಿಯವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ನಡೆಯಿತು. ಕಾಂಗ್ರೆಸ್ ನಾಯಕರಾದ ಸುಂದರ ಹೆಗ್ಡೆ, ಬೈಕಾಡಿ ಮಂಜುನಾಥ ರಾವ್ ಶಿವಪುರ, ಶಂಕರ ಶೆಟ್ಟಿ ಶಿವಪುರ, ಭೋಜ ಕುಲಾಲ್, ಪ್ರಮುಖರಾದ ಪ್ರಭಾಕರ ಭಂಡಾರಿ, ಜಗದೀಶ ನಾಯಕ್, ದಿನೇಶ ಶೆಟ್ಟಿ ಸೂರಿಮಣ್ಣು, ಗೋವಿಂದ ಶೇರಿಗಾರ್, ಪ್ರಕಾಶ ನಾಯಕ್, ಪುರಂದರ ಶೆಟ್ಟಿ, ಡಾ.ಗೋಪಾಲ ಪೂಜಾರಿ, ಸುಮಿತ್ ಶೆಟ್ಟಿ ಬಿಲ್ಲುಬೈಲ್ ಮತ್ತಿತರರು ಉಪಸ್ಥಿತರಿದ್ದರು.
ವರಂಗ: ವರಂಗ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುನಿಯಾಲು ರವಿ ಪೂಜಾರಿ ನೇತ್ರತ್ವದಲ್ಲಿ ಭಾನುವಾರ ಕಾಂಗ್ರೆಸ್ ನಾಯಕರಾದ ಮಾಜಿ ಶಾಸಕ ದಿ.ಹೆಬ್ರಿ ಗೋಪಾಲ ಭಂಡಾರಿಯವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ವರಂಗದ ಸುಜಲದಲ್ಲಿ ನಡೆಯಿತು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವರಂಗ ಲಕ್ಷ್ಮಣ ಆಚಾರ್, ಮುಖಂಡರಾದ ಗೋಪಾಲ ಕುಲಾಲ್, ಮುನಿಯಾಲು ಪಾಲ್ಜಡ್ಡು ಉದಯ ನಾಯ್ಕ್, ಪ್ರಮುಖರಾದ ಉದಯ ಆಚಾರ್ ವರಂಗ, ವಕೀಲ ಸುರೇಶ ಪೂಜಾರಿ, ಸುಂದರ ಪೂಜಾರಿ, ಪಂಚಾಯಿತಿ ಸದಸ್ಯ ಪ್ರಕಾಶ ದೇವಾಡಿಗ, ರತ್ನಾಕರ ಪೂಜಾರಿ, ಸಂತೋಷ ಪೂಜಾರಿ ಮತ್ತಿತರರು ಇದ್ದರು. ಚಾರದ ಅಧ್ಯಕ್ಷ ಎಚ್. ಪ್ರದೀಪ್ ಭಂಡಾರಿ, ನಾಡ್ಪಾಲಿನ ವಿಶು ಕುಮಾರ್ ಶೆಟ್ಟಿ, ಕುಚ್ಚೂರಿನ ಚೇತನ್ ಕುಮಾರ್, ಮುದ್ರಾಡಿ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಕಡ್ತಲದ ಜಗದೀಶ ಹೆಗ್ಡೆ, ಅಜೆಕಾರು ಮರ್ಣೆಯ ರಾಮಕೃಷ್ಣ ಶೆಟ್ಟಿ ಕೆರ್ವಾಸೆಯ ಡಯಾಸ್ ಚೆರಿಯನ್ ನೇತ್ರತ್ವದಲ್ಲಿ ಪ್ರತೀ ಗ್ರಾಮದಲ್ಲೂ ಗೋಪಾಲ ಭಂಡಾರಿ ಅವರ ಪುಣ್ಯ ಸ್ಮರಣೆ ನಡೆಯಿತು.