ಉಡುಪಿ: ವೈದ್ಯರ ಮೇಲಿನ ಹಲ್ಲೆಯನ್ನು ವಿರೋಧಿಸಿ ಐಎಮ್ ಎ ಪ್ರತಿಭಟನೆ

ಉಡುಪಿ: ದೇಶದಲ್ಲಿ ವೈದ್ಯರ ಮೇಲಿನ ಹಲ್ಲೆಯನ್ನು ವಿರೋಧಿಸಿ ಹಾಗೂ ವೈದ್ಯರ ರಕ್ಷಣೆಗೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ (ಐ.ಎಮ್.ಎ) ಉಡುಪಿ-ಕರಾವಳಿ ಶಾಖೆಯಿಂದ ಕಪ್ಪು ಪಟ್ಟಿ ಪ್ರದರ್ಶನ ಹಾಗೂ ಕಪ್ಪು ಮಾಸ್ಕ ಧರಿಸಿ ಐ.ಎಮ್.ಎ ಭವನದ ಎದುರು ಇಂದು ಪ್ರತಿಭಟನೆ ನಡೆಸಿದರು.

ಡಾ. ಉಮೇಶ್ ಪ್ರಭು, ಅಧ್ಯಕ್ಷರು, ಐ.ಎಮ್.ಎ, ಉಡುಪಿ-ಕರಾವಳಿ  ಇವರ ಉಪಸ್ಥಿತಿಯಲ್ಲಿ  ಕಾರ್ಯದರ್ಶಿ ಡಾ. ಪ್ರಕಾಶ್ ಭಟ್ ಇವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಪಿ ಜಿಲ್ಲಾಧಿಕಾರಿ ಮುಲಕ ಸಲ್ಲಿಸುವ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭ ಭಾರತೀಯ ವೈದ್ಯಕೀಯ ಸಂಘ (ಐ.ಎಮ್.ಎ) ಉಡುಪಿ-ಕರಾವಳಿ ಇದರ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!