ಸ್ವಾಮೀಜಿಗಳೂ ರಾಜಕಾರಣ ಮಾಡುತ್ತಿರುವುದು ಒಳ್ಳೆಯದಲ್ಲ: ಸಿದ್ದರಾಮಯ್ಯ ಪಲಿಮಾರು ಶ್ರೀಗಳಿಗೆ ತಿರುಗೇಟು

ಬೆಂಗಳೂರು: ಸ್ವಾಮೀಜಿಗಳೂ ರಾಜಕಾರಣ ಮಾಡುತ್ತಿರುವುದು ಒಳ್ಳೆಯದಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ  ಪಲಿಮಾರು ಶ್ರೀಗಳಿಗೆ ತಿರುಗೇಟು ನೀಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಪಲಿಮಾರು ಶ್ರೀಗಳಿಗಳು ಗರಂ ಆಗಿದ್ದರು.

ಇದೀಗ ಪಲಿಮಾರು ಶ್ರೀಗಳಿಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ಅವರು, ಸ್ವಾಮೀಜಿಗಳೆಲ್ಲರೂ ಇತ್ತೀಚೆಗೆ ರಾಜಕಾರಣಿಗಳಾಗುತ್ತಿದ್ದಾರೆ.  ಇತ್ತೀಚೆಗೆ ಸ್ವಾಮೀಜಿಗಳು ರಾಜಕೀಯ ಮಾತನಾಡುವಂತಾಗಿದೆ. ಆದರೆ ಸ್ವಾಮೀಜಿಗಳು ಧಾರ್ಮಿಕ ವಿಷಯಗಳಿಗೆ ಸೀಮಿತಗೊಳ್ಳದೇ ರಾಜಕಾರಣದ ಮಾತನ್ನು ಆಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!