ಉತ್ತರಾಖಂಡ ಹಿಮ ಪ್ರವಾಹ: ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ, 3 ಮೃತ ದೇಹ ಪತ್ತೆ

ಉತ್ತರಾಖಂಡ: ಚಿಮೋಲಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಿರುವ ಹಿನ್ನೆಲೆಯಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದ್ದು, ವಿವಿಧ ಸೇನಾಪಡೆಗಳಿಂದ ಸಮಾರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಈ ಘಟನೆಯಿಂದ 150 ಮಂದಿ ನಾಪತ್ತೆಯಾಗಿದ್ದು, ಮೂವರ ಮೃತದೇಹಗಳು ಸಿಕ್ಕಿರುವುದಾಗಿ ರಕ್ಷಣಾ ತಂಡಗಳು ತಿಳಿಸಿವೆ.

ಜೋಶಿಮಠ್ ಪ್ರದೇಶದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡವನ್ನು ನಿಯೋಜಿಸಲಾಗಿದೆ ಎಂದು ಎನ್ ಡಿಆರ್ ಎಫ್ ಡೈರೆಕ್ಟರ್ ಜನರಲ್ ಎಸ್.ಎನ್. ಪ್ರಧಾನ್ ಹೇಳಿದ್ದಾರೆ. ಇನ್ನೂ ಮೂರ್ನಾಲ್ಕು ತಂಡಗಳನ್ನು ದೆಹಲಿಯಿಂದ ಡೆಹ್ರಡೂನ್ ಗೆ ಏರ್ ಲಿಫ್ಟ್ ಮಾಡಿ, ನಂತರ ಜೋಶಿಮಠ್ ಗೆ ಕಳುಹಿಸಲಾಗುವುದು.

600 ಸೇನಾ ಸಿಬ್ಬಂದಿಯನ್ನೊಳಗೊಂಡ ಆರು ತುಕಡಿಗಳು ಈಗಾಗಲೇ ಪ್ರವಾಹ ಭಾದಿತ ಪ್ರದೇಶಕ್ಕೆ ಆಗಮಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್ ನ್ನು ಕೂಡಾ ನಿಯೋಜಿಸಲಾಗಿದೆ. ಒಂದು ಎಂಜಿನಿಯರಿಂಗ್ ಕಾರ್ಯಪಡೆಯನ್ನು ರಿಂಗಿ ಗ್ರಾಮಕ್ಕೆ ಕಳುಹಿಸಲಾಗಿದ್ದು, ಎರಡು ವೈದ್ಯಕೀಯ ತಂಡಗಳು ಕಾರ್ಯಾಚರಣೆಗೆ ಸೇರ್ಪಡೆಗೊಂಡಿವೆ.
 
ಪ್ರವಾಹ ಉಂಟಾದ ಬಳಿಕ ಇಂಡೋ-ಟಿಬೆಟನ್ ಬಾರ್ಡರ್ ಗಸ್ತು ಸಿಬ್ಬಂದಿ ತಪೋವನ್ ಮತ್ತು ರೆನಿ ಪ್ರದೇಶಕ್ಕೆ ಆಗಮಿಸಿದ್ದು, ಸ್ಥಳೀಯ ಆಡಳಿತದೊಂದಿಗೆ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಯ ಚುರುಕಿನಿಂದ ಸಾಗಿದೆ ಎಂದು ರಿಷಿಕೇಶಿ ಬಳಿಯ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!