ರಜನಿಕಾಂತ್ ರಾಜಕೀಯ ಪ್ರವೇಶಿಸಬೇಕು: ಅಭಿಮಾನಿಗಳ ಬಿಗಿಪಟ್ಟು

ಚೆನ್ನೈ: ತಮಿಳು ಚಿತ್ರರಂಗದ  ಸೂಪರ್ ಸ್ಟಾರ್ ರಜನಿಕಾಂತ್   ರಾಜಕೀಯ  ಪ್ರವೇಶಿಸಬೇಕೆಂಬ ತಮ್ಮ   ಬೇಡಿಕೆಯಿಂದ  ಹಿಂದೆ ಸರಿಯಲು  ಅವರ ಅಭಿಮಾನಿಗಳು  ಒಪ್ಪುತ್ತಿಲ್ಲ. 

ತಾವು  ರಾಜಕೀಯ  ಪ್ರವೇಶಿಸುವುದಿಲ್ಲ ಎಂದು ರಜನೀಕಾಂತ್ ಈಗಾಗಲೇ ಸ್ಪಷ್ಟಪಡಿಸಿದ್ದರೂ, ಅಭಿಮಾನಿಗಳು ಮಾತ್ರ ತಮ್ಮ ಬೇಡಿಕೆಯನ್ನು ಕೈಬಿಡುತ್ತಿಲ್ಲ. ತಲೈವಾ ರಜನಿಕಾಂತ್ ರಾಜಕೀಯಕ್ಕೆ ಬರಬೇಕು,ಅವರು ಮುಖ್ಯಮಂತ್ರಿ ಯಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಚೆನ್ನೈನಲ್ಲಿ ಭಾನುವಾರ ರಜನಿಕಾಂತ್ ಅಭಿಮಾನಿ ಸಂಘಗಳಿಗೆ ಸೇರಿದ ಸಾವಿರಾರು ಮಂದಿ ಪ್ರದರ್ಶನ ನಡೆಸಿದರು.ರಾಜಕೀಯ ಪ್ರವೇಶಿಸಬಾರದೆಂಬ ತಮ್ಮ ನಿರ್ಧಾರವನ್ನು  ರಜನಿಕಾಂತ್ ತಕ್ಷಣವೇ ಬದಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಕೂಡಲೇ  ರಾಜಕೀಯ ಪಕ್ಷ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ರಜನಿಕಾಂತ್ ರಾಜಕೀಯಕ್ಕೆ  ಬರಬೇಕು ಎಂದು  ಘೋಷಣೆ ಕೂಗಿದರು.

ಅನಾರೋಗ್ಯದ ಕಾರಣದಿಂದಾಗಿ ತಾವು ರಾಜಕೀಯ ಪ್ರವೇಶಿಸುದಿಲ್ಲ ಎಂದು ಡಿಸೆಂಬರ್ 29 ರಂದು ರಜನಿ ಕಾಂತ್ ಸ್ಪಷ್ಟಪಡಿಸಿದ್ದರು. ರಾಜಕೀಯ ಪಕ್ಷ ಸ್ಥಾಪನೆಯಿಂದ ಹಿಂದೆ ಸರಿಯುತ್ತಿದ್ದು, ರಾಜಕೀಯ ಪ್ರವೇಶಿಸದೆ ಅನ್ಯ ಮಾರ್ಗದಿಂದ ಜನರ ಸೇವೆ ಮಾಡುವುದಾಗಿ ಹೇಳಿಕೆ ನೀಡಿದ್ದರು. ರಜನಿ ಕಾಂತ್, ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ಮೂರು ದಿನಗಳ ಬಳಿಕ ರಾಜಕೀಯ ಪ್ರವೇಶಿಸದ ಹೇಳಿಕೆ ಹೊರಬಿದ್ದಿತ್ತು.

Leave a Reply

Your email address will not be published. Required fields are marked *

error: Content is protected !!