ರೈತ ಸಂಘಟನೆಗಳೊಂದಿಗೆ ಗೃಹ ಸಚಿವರ ಮಾತುಕತೆಯೂ ವಿಫಲ

ನವದೆಹಲಿ: ಭಾರತ್ ಬಂದ್ ವಿಚಾರವಾಗಿ ರೈತ ಸಂಘಟನೆಗಳ 13 ಪ್ರತಿನಿಧಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಡೆಸಿರುವ ಮಾತುಕತೆ ವಿಫಲವಾಗಿದೆ.  ನಿನ್ನೆ ರಾತ್ರಿ ೮.೩೦ರ ಸುಮಾರಿಗೆ ಅನೌಪಚಾರಿಕ ಮಾತುಕತೆ ನಡೆಸಿದ ಕೇಂದ್ರ ಗೃಹ ಸಚಿವರು, ಕಾಯ್ದೆಗಳಲ್ಲಿ ತಿದ್ದುಪಡು ಮಾಡುವ ಬಗ್ಗೆ ಲಿಖಿತ ಭರವಸೆ ನೀಡಲಾಗುವುದೆಂದು ಹೇಳಿದ್ದಾರೆ.

ಈ ಬಗ್ಗೆ ರೈತ ಮುಖಂಡ ಹನ್ನನ್ ಮೊಲ್ಲಾ ಮಾಹಿತಿ ನೀಡಿ, ಕಾಯ್ದೆಗಳಿಗೆ ತಿದ್ದುಪಡು ಮಾಡುವ ಬಗ್ಗೆ ಲಿಖಿತ ಭರವಸೆ ನೀಡಲಾಗುವುದು ಎಂದು ಹೇಳಿದ್ದಾರೆ. ಆದರೆ ನಮ್ಮ ಬೇಡಿಕೆ ಕಾಯ್ದೆಯನ್ನು ರದ್ದು ಮಾಡುವುದಾಗಿದೆ. ಅದರಲ್ಲಿ ನಾವು ಯಾವುದೇ ರಾಜಿಗೆ ಮುಂದಾಗಲಾರೆವು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!