ರಾಜ್ಯಕ್ಕೆ ಚೆಂಬು ಭಾಗ್ಯ- ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಎಂಬ ಸರ್ವಾಧಿಕಾರಿ ಕರ್ನಾಟಕ ರಾಜ್ಯಕ್ಕೆ ನೀಡಿದ ಚೆಂಬು ಭಾಗ್ಯದ ವಿರುದ್ದ ನಡೆದ ಕಾರ್ಯಕರ್ತರ ಪ್ರತಿಭಟನೆಗೆ ಭಾನುವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದ ಎದುರು ಚಾಲನೆ ನೀಡಲಾಯಿತು. 

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕೊಡವೂರು, ಕಾರ್ಯಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್, ಹರೀಶ್ ಕಿಣಿ, ಮಹಾಬಲ ಕುಂದರ್, ಜಿತೇಶ್ ಶಂಕರಪುರ ಉಪಸ್ಥಿತರಿದ್ದರು.  

ಕೋಟ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ “ಇಂದಿರಾ ಭವನ” ಕಚೇರಿನಲ್ಲಿ ಚೊಂಬು” ಪ್ರತಿಭಟನೆ ನಡೆಯಿತು.

ಕರ್ನಾಟಕದ ತೆರಿಗೆ ಪಾಲನ್ನು ಸರಿಯಾಗಿ ನೀಡದೆ, ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾಗಿರುವ ನೆರೆ, ಬರ ಪರಿಹಾರ ಮೊತ್ತವನ್ನು ನೀಡದೆ, ಕರ್ನಾಟಕ ಸಂಗ್ರಹಿಸಿ ಕೊಟ್ಟ ತೆರಿಗೆ ಹಣವನ್ನು ಮರಳಿಸದ ಕೇಂದ್ರ ಬಿಜೆಪಿ ಸರಕಾರ ವಂಚಿಸುತ್ತಿರುವುದರ ವಿರುದ್ಧ ಕಾಂಗ್ರೆಸ್ ಆರಂಭಿಸಿರುವ ಚೊಂಬು ಚಳುವಳಿಯನ್ನು ಕೋಟ ಬ್ಲಾಕ್ ಕಾಂಗ್ರೆಸ್ ನಲ್ಲಿ ನಡೆಸಲಾಯಿತು. ಕೇಂದ್ರದಿಂದ ಕರ್ನಾಟಕಕ್ಕೆ ಕನ್ನಡಿಗರಿಗೆ ದೊರಕಿರುವುದು ಕೇವಲ ಚೊಂಬು ಮಾತ್ರ ಎಂದು ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ ಎ ಕುಂದರ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಸದ್ಯಸರಾದ ರವೀಂದ್ರ ಕಾಮತ್ ಗುಂಡ್ಮಿ, ಹಿಂದುಳಿದ ಘಟಕದ ಅಧ್ಯಕ್ಷರಾದ ದಿನೇಶ್ ಬಂಗೇರ ಗುಂಡ್ಮಿ, ಕಾಂಗ್ರೆಸ್ ಮುಖಂಡರಾದ ಗೋಪಾಲ ಬಂಗೇರ, ಉಮೇಶ್ ಮರಕಾಲ, ಸಂತೋಷ ಹೇರಾಡಿ, ಕರುಣಾಕರ ಪೂಜಾರಿ ಯಡ್ತಾಡಿ, ನರಸಿಂಹ ಮರಕಾಲ ಕೋಟತಟ್ಟು, ವಸಂತಿ ಹೊಸಾಳ, ಜಯಕ್ಕ ಹೊಸಾಳ, ಸುರೇಶ್ ಪೂಜಾರಿ ಯಡ್ತಾಡಿರವರು ಉಪಸಿತರಿದ್ದರು.

Leave a Reply

Your email address will not be published. Required fields are marked *

error: Content is protected !!