ಉಡುಪಿ: ಡಿವೈಡರ್‌ಗೆ ಬೈಕ್ ಢಿಕ್ಕಿ- ಓರ್ವ ಮೃತ್ಯು, ಮೂವರಿಗೆ ಗಾಯ

ಉಡುಪಿ: ಬೈಕೊಂದು ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸಾವರ ಮೃತಪಟ್ಟು ಮೂವರು ಸಹಸವಾರರು ಗಾಯಗೊಂಡ ಘಟನೆ ಶಿರಿಬೀಡು ಜಂಕ್ಷನ್ ಬಳಿ ಎಚ್.ಎಂ.ಟಿ ಗ್ಯಾರೇಜಿನ ಎದುರು ಮಾ.24ರಂದು ಬೆಳಗ್ಗಿನ ಜಾವ 3.30ರ ಸುಮಾರಿಗೆ ನಡೆದಿದೆ.

ಮೃತರನ್ನು ರಾಯಚೂರು ಸಿಂದನೂರು ನಿವಾಸಿ ವೆಂಕಪ್ಪಎಂಬವರ ಮಗ ಶರಣಬಸವ ಎಂದು ಗುರುತಿಸಲಾಗಿದೆ. ಸಹ ಸವಾರರಾದ ಮಂಜುನಾಥ್, ರಮೇಶ್ ಮತ್ತು ಯಮನೂರು ಎಂದು ಗುರುತಿಸಲಾಗಿದೆ.

ಇವರು ನಾಲ್ವರು ಒಂದೇ ಬೈಕಿನಲ್ಲಿ ಕರಾವಳಿ ಕಡೆಯಿಂದ ಶಿರಿಬೀಡು ಕಡೆಗೆ ಏಕಮುಖವಾಗಿ ಸಂಚರಿಸುವ ರಸ್ತೆಯಲ್ಲಿ ಹೋಗುತ್ತಿದ್ದು, ಈ ವೇಳೆ ಬೈಕ್ ರಸ್ತೆ ಮಧ್ಯೆ ಇರುವ ಡಿವೈಡರ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಇವರು ನಾಲ್ವರು ರಸ್ತೆ ಬಿದ್ದರು ಗಾಯಗೊಂಡರು.

ಇದರಲ್ಲಿ ಗಂಭೀರವಾಗಿ ಗಾಯಗೊಂಡು ಶರಣಬಸವ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ವಂದಿಸದೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!