ಸಿದ್ದರಾಮಯ್ಯನವರ ಹೆಸರಲ್ಲಿ ರಾಮ ಇದ್ದರೂ, ಹೃದಯದಲ್ಲಿ ಟಿಪ್ಪು ಸಿದ್ದಾಂತ: ಆರ್.ಅಶೋಕ್
ಬೆಂಗಳೂರು, ಫೆ.03: ಸಿದ್ದರಾಮಯ್ಯನವರ ಹೆಸರಲ್ಲಿ ರಾಮ ಇದ್ದರೂ, ಹೃದಯದಲ್ಲಿ ಟಿಪ್ಪು ಸಿದ್ದಾಂತವನ್ನು ತುಂಬಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರಿಗೆ ಮುಸ್ಲಿಮರು ಸುಮ್ಮನಿದ್ದರೂ ಅವರಿಂದ ಇಸ್ಲಾಂ ಟೋಪಿಯನ್ನು ಹಾಕಿಸಿಕೊಳ್ಳುತ್ತಾರೆ. ಕುಂಕುಮ ಹಚ್ಚಲು ಮುಂದಾದರೆ ಅವರೇ ಬೇಡ ಎನ್ನುತ್ತಾರೆ. ದೇವಸ್ಥಾನದಲ್ಲಿ ಕುಂಕುಮ ಹಚ್ಚಿದರೆ ಅವರೇ ಅಳಿಸಿಕೊಳ್ತಾರೆ ಎಂದು ಟೀಕಿಸಿದರು.
ಟಿಪ್ಪು ಸಿದ್ದಾಂತ ಹೃದಯದಲ್ಲಿ ತುಂಬಿಕೊಂಡಿದ್ದು ಟಿಪ್ಪು ಮೈಮೇಲೆ ಬಂದ ಹಾಗೆ ಆಡುತ್ತಾರೆ. ಸಿದ್ದರಾಮಯ್ಯ ಕುಂಕುಮ ಇಟ್ಟುಕೊಳ್ಳಲಿಲ್ಲಾ ಅಂದ್ರೆ ಏನು ಲಾಸ್ ಇಲ್ಲ. ಕೇಸರಿ ಬಣ್ಣ ಹಾಗೂ ಕುಂಕುಮಕ್ಕೆ ಗೌರವ ಕೊಡುವವರು ಹನುಮ ಧ್ವಜ ಹಾರಿಸುತ್ತಾರೆ ಆದ್ದರಿಂದ ಅವರು ಹಾರಿಸೋದು ಅವಶ್ಯಕತೆ ಇಲ್ಲ. ಮೊದಲು ಹೃದಯದಲ್ಲಿ ರಾಮನನ್ನ ಇಟ್ಟಕೊಳ್ಳಲಿ. ಆಮೇಲೆ ರಾಮಮಂದಿರಕ್ಕೆ ಹಣ ಬಿಡುಗಡೆ ಮಾಡಿ ಎಂದು ಕಿಡಿ ಕಾರಿದರು.