ಉಡುಪಿ: ಗ್ರಾಹಕರ ವೇದಿಕೆ ಹೆಸರಿನಲ್ಲಿ ವ್ಯಕ್ತಿಗೆ 2ಲಕ್ಷ ರೂ. ವಂಚನೆ

ಉಡುಪಿ: ಸ್ಕೂಟರ್ ಡೆಲಿವರಿಯಾಗದ ಬಗ್ಗೆ ದೂರು ನೀಡಿದ ವ್ಯಕ್ತಿಯೊಬ್ಬರಿಗೆ ಗ್ರಾಹಕರ ವೇದಿಕೆ ಹೆಸರಿನಲ್ಲಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತೆಕಟ್ಟೆಯ ರವಿರಾಜ್(27) ಎಂಬವರು ಆನ್‌ಲೈನ್‌ನಲ್ಲಿ ಬುಕ್ ಮಾಡಿ ಓಲಾ ಸ್ಕೂಟರ್ ಡೆಲಿವರಿ ಆಗದ ಬಗ್ಗೆ ಓಲಾ ಕಂಪನಿಯ ವಿರುದ್ದ ದೂರು ನೀಡಲು ಜ.15ರಂದು ಗೂಗಲ್‌ನಲ್ಲಿ ಸರ್ಚ್ ಮಾಡಿ ನ್ಯಾಶನಲ್ ಕಂಸ್ಯೂ ಮರ್ ಫೋರಂ ಎಂಬ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ನಮೂದಿಸಿದ್ದರು.

ನಂತರ ರವಿರಾಜ್‌ಗೆ ಕರೆ ಮಾಡಿ ನಿಮ್ಮ ದೂರನ್ನು ಸ್ವೀಕರಿಸಲಾಗಿದ್ದು, ವಾಟ್ಸಾಪ್‌ನಲ್ಲಿ ಕಳುಹಿಸಿರುವ ಲಿಂಕ್‌ಗೆ ಮಾಹಿತಿ ಯನ್ನು ನಮೂದಿಸುವಂತೆ ಸೂಚಿಸಿದರು. ಅದರಂತೆ ರವಿರಾಜ್ ತನ್ನ ಬ್ಯಾಂಕ್‌ಗಳ ಮಾಹಿತಿಯನ್ನು ನಮೂದಿಸಿದ್ದರು. ಬಳಿಕ ರವಿರಾಜ್ ಅವರ ಗಮನಕ್ಕೆ ಬಾರದೇ ಜ.20ರಂದು ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು 1,99,000ರೂ. ಹಣವನ್ನು ವರ್ಗಾವಣೆ ಮಾಡಿ ಮೋಸ ಮಾಡಿರುವುದಾಗಿ ದೂರಲಾಗಿದೆ.

Leave a Reply

Your email address will not be published. Required fields are marked *

error: Content is protected !!