ಉಡುಪಿ: ಗೀತಾಂಜಲಿ ಸಿಲ್ಕ್ಸ್ಗೆ ಪರ್ಯಾಯ ಪುತ್ತಿಗೆ ಶ್ರೀಗಳ ಭೇಟಿ
![](https://udupitimes.com/wp-content/uploads/2024/01/IMG-20240116-WA0222-1024x576.jpg)
ಉಡುಪಿ: ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉಡುಪಿಯ ಪ್ರಸಿದ್ಧ ಜವಳಿ ಮಳಿಗೆಯಾದ ”ಗೀತಾಂಜಲಿ ಸಿಲ್ಕ್ಸ್“ಗೆ ಇಂದು ಭೇಟಿ ನೀಡಿ ಸಂಸ್ಥೆಯ ಗೌರವ ಸ್ವೀಕರಿಸಿದರು.
![](https://udupitimes.com/wp-content/uploads/2024/01/IMG-20240116-WA0216-1024x577.jpg)
![](https://udupitimes.com/wp-content/uploads/2024/01/IMG-20240116-WA0224-1024x576.jpg)
![](https://udupitimes.com/wp-content/uploads/2024/01/IMG-20240116-WA0220-1024x577.jpg)
ಬಳಿಕ ಪುತ್ತಿಗೆ ಶ್ರೀಗಳು ಅನುಗ್ರಹ ಸಂದೇಶ ಹಾಗೂ ಕೋಟಿ ಗೀತಾ ಲೇಖನ ಅಭಿಯಾನ, ಫಲಮಂತ್ರಾಕ್ಷತೆ ನೀಡಿ ವಿಶ್ವ ಗೀತಾ ಪರ್ಯಾಯಕ್ಕೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಸಂತೋಷ ವಾಗ್ಲೆ, ರಾಮಕೃಷ್ಣ ನಾಯಕ್, ಲಕ್ಷ್ಮಣ್ ನಾಯಕ್, ರಮೇಶ್ ನಾಯಕ್, ಹರೀಶ್ ನಾಯಕ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.