ಕೆಮ್ಮಣ್ಣು: ನಾಪತ್ತೆಯಾದ ವ್ಯಕ್ತಿಯ ಶವ ಸಮುದ್ರದಲ್ಲಿ ಪತ್ತೆ
ಉಡುಪಿ: ನಾಪತ್ತೆಯಾಗಿದ್ದ ಕೆಮ್ಮಣ್ಣು ನಿವಾಸಿಯ ಮೃತದೇಹ ಮಲ್ಪೆ ಪಡುಕೆರೆಯ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿದೆ.
ಜುಲೈ 29 ರಂದು ಕೆಮ್ಮಣ್ಣು ನಿವಾಸಿ ರಾಘವೇಂದ್ರ (44) ನಾಪತ್ತೆಯಾಗಿದ್ದರು. ಇಂದು ಪಡುಕೆರೆ ಸಮುದ್ರ ಕಿನಾರೆಯಲ್ಲಿ ಮೃತದೇಹ ತೇಲುತ್ತಿರುವ ಮಾಹಿತಿ ಪಡೆದ ಈಶ್ವರ ಮಲ್ಪೆಯವರು ಸ್ಥಳಕ್ಕೆ ಧಾವಿಸಿ ಮೃತದೇಹ ಮೇಲಕ್ಕೆತ್ತಿದ್ದಾರೆ.
ಮಳೆಗಾಲದ ಈ ಸಮಯದಲ್ಲಿ ಕಡಲು ಪ್ರಕ್ಶುಬ್ಧಗೊಂಡಿರುವಾಗ ಯಾವುದೇ ದೋಣಿಯ ಸಹಾಯವಿಲ್ಲದೆ ಸರಕಾರದ ಯಾವುದೇ ಇಲಾಖೆಯ ಸಹಕಾರವಿಲ್ಲದೆ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಆಪದ್ಬಾಂಧವ ಈಶ್ವರ ಮಲ್ಪೆ ಜೊತೆಗೆ ಶಬ್ಬೀರ್ ಮಲ್ಪೆ, ರಕ್ಷಿತ್ ಕಾಪು, ದೀಪು ಮಲ್ಪೆ ಹಾಗೂ ಇಮ್ತಿಯಾಝ್ ಕೆಮಣ್ಣು, ಪ್ರತಾಪ್ ಪಡುಕೆರೆ, ಪ್ರವೀಣ್ ಮಲ್ಪೆ , ಹರ್ಷಿತ್ ಜೆ ಕುಂದರ್ ಭಾಗಿಯಾಗಿದ್ದರು.