ಕಿನ್ನಿಮುಲ್ಕಿ: ಬ್ರಹ್ಮ ಬೈದರ್ಕಳ ನಗರ ಬಡಾವಣೆ ನಿವಾಸಿಗಳ ಸಂಘದ ಮಹಾಸಭೆ

ಉಡುಪಿ: ಕಿನ್ನಿಮುಲ್ಕಿಯ ಬ್ರಹ್ಮ ಬೈದರ್ಕಳ ನಗರ ಬಡಾವಣೆ ನಿವಾಸಿಗಳ ಸಂಘದ ಮಹಾಸಭೆ ಇತ್ತೀಚಿಗೆ ಶ್ರೀವೀರಭದ್ರ ಕಲಾಭವನದಲ್ಲಿ ಜರಗಿತು.

ಉಡುಪಿ ನಗರ ಸಭಾ ಸದಸ್ಯೆ ಅಮೃತ ಕೃಷ್ಣಮೂರ್ತಿ ಆಚಾರ್ಯ ಅಧ್ಯಕ್ಷತೆ ವಹಿಸಿ ಬಡಾವಣೆಯನ್ನು ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸರಕಾರದ ಅನುದಾನದಿಂದ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಬಡಾವಣೆಯ ನಿವಾಸಿಗಳಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅನಾರೋಗ್ಯದಿಂದ ಆರ್ಥಿಕ ಸಂಕಷ್ಟದಲ್ಲಿರುವ ಬಡಾವಣೆಯ ನಿವಾಸಿಗೆ ಸಂಘದ ವತಿಯಿಂದ ಸಹಾಯಧನ ವಿತರಿಸಲಾಯಿತು. ಅಧ್ಯಕ್ಷರಾದ ವಿಜಯ್ ಕುಮಾರ್ ಇವರು ಸ್ವಾಗತಿಸಿದರು. ಸಂಘದ ಜೊತೆ ಕಾರ್ಯದರ್ಶಿ ಪುಷ್ಪಲತಾ ತಂತ್ರಿ ವರದಿ ವಾಚಿಸಿದರು. ಕೋಶಾಧಿಕಾರಿ ಗುಣಪಾಲ್ ಲೆಕ್ಕಪತ್ರ ಮಂಡಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಶಂಕರ್ ಯು ಇವರು ವಂದಿಸಿದರು.

2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಧೀರ್ ಕುಮಾರ್ ರವರು ಆಯ್ಕೆಯಾದರು. ನಂತರ ಸದಸ್ಯರಿಗೆ ವಿವಿಧ ಸ್ಪರ್ಧೆ ಜರಗಿಸಿ ಬಹುಮಾನ ವಿತರಿಸಲಾಯಿತು. ಪುಷ್ಪಲತಾ ರಂಜನ್ ಅವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!