ಶಿವಪುರ ಹಾಲು ಡೇರಿಯ ಚುನಾವಣೆ: 13 ಸ್ಥಾನ ಗೆದ್ದು ಮತ್ತೆ ಅಧಿಕಾರದ ಗದ್ದುಗೆಗೆ ಕಾಂಗ್ರೆಸ್
ಶಿವಪುರ: ಹೆಬ್ರಿ ತಾಲೂಕಿನ ಪ್ರತಿಷ್ಠಿತ ಶಿವಪುರ ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಯ 13 ನಿರ್ದೇಶಕ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ 13 ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತರು ಪಡೆಯುವ ಮೂಲಕ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದ್ದಾರೆ.
ಶಿವಪುರ ಹಾಲು ಡೇರಿಯ ಚುನಾವಣೆಯು ಕಾಂಗ್ರೆಸ್ ಬಿಜೆಪಿಯ ನಡುವೆ ಪ್ರತಿಷ್ಠೆಯ ಕಣವಾಗಿತ್ತು. ಸಹಕಾರ ಇಲಾಖೆಯ ಜಯಂತಿ ಎಸ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಡೈರಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಇಂದಿರಾ ಜಗನ್ನಾಥ ಕುಲಾಲ್ ಮತ್ತು ಸಿಬ್ಬಂದ್ಧಿ ವರ್ಗದವರು ಸಹಕಾರ ನೀಡಿದರು. ಸಂಜೆ ವಿಜಯೋತ್ಸವ ನಡೆಯಿತು.
ಹಿರಿಯ ಸಹಕಾರಿ ದುರೀಣ ನೀರೆ ಕೃಷ್ಣ ಶೆಟ್ಟಿ, ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಪ್ರಮುಖರಾದ ಹೆಬ್ರಿ ಪ್ರವೀಣ್ ಬಲ್ಲಾಳ್, ಮುದ್ರಾಡಿ ಮಂಜುನಾಥ ಪೂಜಾರಿ, ನವೀನ್ ಕೆ ಅಡ್ಯಂತಾಯ, ಎಚ್. ಜನಾರ್ಧನ್, ನಿತೀಶ್ ಎಸ್ ಪಿ, ಶಿವಪುರದ ಮುಖಂಡರಾದ ಮೂರ್ಸಾಲು ಮೋಹನದಾಸ ನಾಯಕ್, ಬೈಕಾಡಿ ಮಂಜುನಾಥ ಭಟ್ ಶಿವಪುರ, ಸುರೇಶ್ ರಾವ್ ಕುಂದಾರು,ಸೂರಿಮಣ್ಣು ದಿನೇಶ ಶೆಟ್ಟಿ, ಕೃಷ್ಣ ಆಚಾರ್, ಪ್ರತಾಪ ಶೆಟ್ಟಿ ಕೆರೆಬೆಟ್ಟು, ಗೋವಿಂದ ಶೇರಿಗಾರ್ ಸೇರಿದಂತೆ ಪ್ರಮುಖರು ವಿಜಯೋತ್ಸವ ದಲ್ಲಿ ಭಾಗವಹಿಸಿದ್ದರು.
ಆಯ್ಕೆಯಾದವರ ವಿವರ: ಕಾಂಗ್ರೆಸ್ ಬೆಂಬಲಿತ ಚೀಂಕ್ರ ಅವಿರೋಧವಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಬೆಂಬಲಿತರಾದ ಬೋಜ ಹಾಂಡ, ನಾಗೇಶ ಶೇರಿಗಾರ್, ಅರುಣ್ ಶೆಟ್ಟಿ, ಜಯಶ್ರೀ, ಸುಂದರ ಹೆಗ್ಡೆ, ವಾದಿರಾಜ ಆಚಾರ್ಯ, ಶಶಿಕಲಾ ಜೆ.ವಾರಂಬಳ್ಳಿ ಸಾಮಾನ್ಯ ಕ್ಷೇತ್ರದಿಂದ, ಮಹಿಳಾ ಮೀಸಲಾತಿ ಕ್ಷೇತ್ರದಲ್ಲಿ ಶೈಲಜಾ ನಾಯಕ್ ಮತ್ತು ಜಯಂತಿ ಕಾಮತ್, ಹಿಂದುಳಿದ ವರ್ಗಗಳ ವಿಭಾಗದಿಂದ ಸಂತೋಷ ಶೆಟ್ಟಿ ಮತ್ತು ವಿಶ್ವನಾಥ ನಾಯಕ್ ಹಾಗೂ ಪರಿಶಿಷ್ಟ ಪಂಗಡದಿಂದ ಲಕ್ಷ್ಮಣ ನಾಯ್ಕ್ ಆಯ್ಕೆಯಾಗಿದ್ದಾರೆ.