ಕುಕ್ಕಿಕಟ್ಟೆ: ಹದಗೆಟ್ಟ ಮುಖ್ಯರಸ್ತೆ- ದಿನನಿತ್ಯ ಅಪಘಾತಗಳ ಸರಮಾಲೆ

ಉಡುಪಿ: ಕುಕ್ಕಿಕಟ್ಟೆ ಶಾಲೆಯ ಬಳಿಯ ಮುಖ್ಯ ರಸ್ತೆಯು ತೀವ್ರ ಹದಗೆಟ್ಟು ಬೃಹತ್ ಹೊಂಡ ಉಂಟಾಗಿದ್ದು, ದಿನನಿತ್ಯ ಅಪಘಾತಗಳು ಸಂಭವಸುತ್ತಿದೆ. 

ಕುಕ್ಕಿಕಟ್ಟೆಯಿಂದ ಅಲೆವೂರು ಹೋಗುವ ಮುಖ್ಯ ರಸ್ತೆಯ ಬದಿ ಸೂಕ್ತವಾಗಿ ಮಳೆ ನೀರು ಹರಿಯುವ ಚರಂಡಿ ನಿರ್ಮಿಸದ ಕಾರಣ ರಸ್ತೆಯಲ್ಲಿ ಬೃಹತ್ ಹೊಂಡ ಉಂಟಾಗಿದೆ. ದಿನ ನಿತ್ಯ ಸಾವಿರಾರು ವಾಹನ ಸಂಚರಿಸು ಈ ಮುಖ್ಯ ರಸ್ತೆಯ ತುಂಬಾ ಕೆಸರು ನೀರು ರಸ್ತೆಯಲ್ಲಿಯೇ ಹರಿಯುವುದರಿಂದ ಪಾದಾಚಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.

ಇಲ್ಲಿ ನಗರ ಸಭೆಯಿಂದ ಲಕ್ಷಾಂತರ ರೂ. ವ್ಯಯಿಸಿ ಚರಂಡಿ ನಿರ್ಮಿಸಿದರೂ ರಸ್ತೆಯಲ್ಲಿಯೇ ಮಳೆ ನೀರು ಹರಿಯುತ್ತಿದೆ. ತಕ್ಷಣ ನಗರಸಭೆ ಎಚ್ಚೆತ್ತು ಈ ಬೃಹತ್ ಹೊಂಡಕ್ಕೆ ಮುಕ್ತಿ ನೀಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!