ಅಲೆವೂರು: ರಾಂಪುರದಲ್ಲಿ ಅವಘಡವನ್ನು ಆಹ್ವಾನಿಸುವ ಸರ್ಕಲ್
ಉಡುಪಿ: ಜೂ.13(ಉಡುಪಿ ಟೈಮ್ಸ್ ವರದಿ) ಅಲೆವೂರು ರಾಮಪುರ ಮುಖ್ಯ ರಸ್ತೆಯಲ್ಲಿರುವ ಸರ್ಕಲ್ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಅಪಘಾತವನ್ನು ಆಹ್ವಾನಿಸುವಂತಿದೆ.
ಅಲೆವೂರಿನಿಂದ ದೊಂದುಕಟ್ಟೆ ಹೋಗುವ ರಾಂಪುರ ಬಳಿಯ ಸರ್ಕಲ್ನ ಕಟ್ಟೆಯು ಸಂಪೂರ್ಣ ಕುಸಿದು ಬಿದ್ದಿದೆ. ಇದಕ್ಕೆ ಅಳವಡಿಸಿದ ವಿದ್ಯುತ್ ದೀಪದ ಕಬ್ಬಿಣದ ಕಂಬ ಇವತ್ತೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ.
ಈ ಭಾಗದಲ್ಲಿ ದಿನ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಅವಘಡ ಸಂಭವಿಸುವ ಮೊದಲು ಸಂಬಂಧ ಪಟ್ಟ ಇಲಾಖೆ, ಅಲೆವೂರು ಗ್ರಾಮ ಪಂಚಾಯತ್ ಎಚ್ಚೆತ್ತು ದುರಸ್ತಿಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.