ಹೇಳದೆ ತವರು ಮನೆಗೆ ಹೋದ ಪತ್ನಿ… ಕೋಪಗೊಂಡ ಪತಿರಾಯ ಏನನ್ನು ಕತ್ತರಿಸಿಕೊಂಡು ಕುಲದೇವರಿಗೆ ಅರ್ಪಿಸಿದ ಗೊತ್ತಾ…?

ಪತ್ನಿ ಮೇಲಿನ ಕೋಪಕ್ಕೆ ವ್ಯಕ್ತಿಯೋರ್ವ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಮುರಳಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪತ್ನಿ ತಿಳಿಸದೆ ತನ್ನ ತಾಯಿಯ ಮನೆಗೆ ಹೋಗಿದ್ದರಿಂದ ಕೋಪಗೊಂಡ 27 ವರ್ಷದ ಕೃಷ್ಣ ಬಸುಕಿ ಎಂಬಾತ ಖಾಸಗಿ ಅಂಗವನ್ನು ಕತ್ತರಿಸಿ ಕುಲದೇವತೆಗೆ ಅರ್ಪಿಸಿದ್ದಾನೆ. ಈ ಘಟನೆಯ ಬಳಿಕ ಕೃಷ್ಣನನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪತ್ನಿ ತನಗೆ ಹೇಳದೆ ತವರು ಮನೆಗೆ ಹೋಗಿರುವ ವಿಷಯ ಶುಕ್ರವಾರ ತಡರಾತ್ರಿ ಕೃಷ್ಣಾ ಬಸುಕಿಗೆ ತಿಳಿಯಿತು. ಇದರಿಂದ ಕೋಪಗೊಂಡ ಆತ ಹರಿತವಾದ ಆಯುಧದಿಂದ ತನ್ನ ಖಾಸಗಿ ಅಂಗವನ್ನೇ ಕತ್ತರಿಸಿದ್ದಾನೆ. ಇದರ ನಂತರ, ಕತ್ತರಿಸಿದ ಖಾಸಗಿ ಭಾಗವನ್ನು ಸ್ವಂತ ಕುಲದೇವತೆಯ ಸ್ಥಳದಲ್ಲಿ ಅರ್ಪಿಸಿದ್ದಾನೆ.

ಕೃಷ್ಣ ಬಸುಕಿ ಪಂಜಾಬ್‌ನ ಮಂಡಿಯಲ್ಲಿ ನೆಲೆಸಿದ್ದು ಅಲ್ಲೇ ಕೆಲಸ ಮಾಡುತ್ತಾ ಕುಟುಂಬವನ್ನು ಪೋಷಿಸುತ್ತಿದ್ದನು ಎಂದು ಸಂಬಂಧಿಕರು ತಿಳಿಸಿದ್ದಾರೆ. ಕೃಷ್ಣಾಗೆ ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರ ಜನಿಸಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೇ ಮಗ ಜನಿಸಿದ್ದ. ಎರಡು ತಿಂಗಳ ಹಿಂದಷ್ಟೇ ಪಂಜಾಬ್ ನಿಂದ ಕೃಷ್ಣ ಬಾಸುಕಿ ಮನೆಗೆ ಬಂದಿದ್ದನು ಎನ್ನಲಾಗಿದೆ. ಕೃಷ್ಣ ಬಸುಕಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!