ಹೆಬ್ರಿ: ಸೆಗಣಿ ಗುಂಡಿಗೆ ಬಿದ್ದು 4 ವರ್ಷದ ಮಗು ಮೃತ್ಯು

ಹೆಬ್ರಿ ಡಿ.5: ತಾಲೂಕಿನ ಮುದ್ರಾಡಿಯ ಬಚ್ಚಪ್ಪು ಎಂಬಲ್ಲಿ ತೋಟದಲ್ಲಿ ಆಟವಾಡುತ್ತಿದ್ದ 4 ವರ್ಷದ ಮಗು ಸೆಗಣಿ ಗುಂಡಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಜಾಖರ್ಂಡ್ ಮೂಲದ ಸೋಮೇಶ್ವರ ಓಕಾನ್ ಎಂಬವರ 4 ವರ್ಷದ ಮಗ ಮುನೇಶ್ವರ ಮೃತಪಟ್ಟ ಬಾಲಕ. ಸೋಮೇಶ್ವರ ಓಕಾನ್ ಕಳೆದ 6 ವರ್ಷಗಳಿಂದ ತನ್ನ ಪತ್ನಿ ಮಗನ ಜತೆಗೆ ಬಚ್ಚಪ್ಪು ಎಂಬಲ್ಲಿನ ಆಂಟನಿಯವರ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದು, ಅಲ್ಲಿಯೇ ವಾಸವಾಗಿದ್ದರು.

ಎಂದಿನಂತೆ ಡಿ.4 ರಂದು ಸೋಮೇಶ್ವರ ಅವರ ಮಗ ಮುನೇಶ್ವರ ತೋಟದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಸೆಗಣಿಯ ಗುಂಡಿಗೆ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾನೆ. 11 ಗಂಟೆಗೆ ಆಟ ಆಡಲೆಂದು ಹೋರಹೋಗಿದ್ದ ಮಗು ಮರಳಿ ಮನೆಗೆ ಬಾರದಿದ್ದಾಗ ಆತಂಕಗೊಂಡ ಮಗುವಿನ ತಾಯಿ ಹುಡುಕಿಕೊಂಡು ಹೋಗಿದ್ದಾರೆ. ಈ ವೇಳೆ ಮಗುವಿನ ಮೃತದೇಹ ಸೆಗಣಿ ಗುಂಡಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!