ಹಾವಿನ ವಿಷ ಚುಚ್ಚಿ ಪತ್ನಿಯ ಹತ್ಯೆ ಪ್ರಕರಣ-ವೈದ್ಯ ಪತಿ ಸಹಿತ ಇತರ ಆರೋಪಿಗಳ ಖುಲಾಸೆ

ಉಡುಪಿ, ನ.3: ಹನ್ನೆರಡು ವರ್ಷಗಳ ಹಿಂದೆ ಹೆಬ್ರಿ ಬೆಳಂಜೆಯಲ್ಲಿ ವೈದ್ಯನೊಬ್ಬ ತನ್ನ ಪತ್ನಿಗೆ ನಾಗರ ಹಾವಿನ ವಿಷದ ಇಂಜೆಕ್ಷನ್ ಚುಚ್ಚಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್ ಆರೋಪವನ್ನು ಸಾಬೀತುಪಡಿಸಲು ವಿಫಲರಾಗಿರುವ ಕಾರಣ ಆರೋಪಿಗಳನ್ನು ಖುಲಾಸೆಗೊಳಿಸಿ ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಎಂದು ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಹೆಗ್ಡೆೆ ಆದೇಶಿಸಿದ್ದಾರೆ.

ಘಟನೆ ವಿವರ: ಹಾಸನದ ವೈದ್ಯ ಡಾ ಸುರೇಶ್ ಪ್ರಭು ಹಾಗೂ ಮೃತ ಭಾಗೀರಥಿ(32) ಪತಿ-ಪತ್ನಿಯಾಗಿದ್ದು, ಇವರ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಬಾರದೆ ವೈಮನಸ್ಸು ಉಂಟಾಗಿದ್ದರಿಂದ ಆತ ವಿಚ್ಚೇದನ ನೀಡಲು ಬಯಸಿದ್ದ. ಆದರೆ ಭಾಗೀರಥಿ ಇದಕ್ಕೆೆ ಒಪ್ಪದಿದ್ದರಿಂದ ಅಸಮಾಧಾನಗೊಂಡ ಆರೋಪಿಯು ತಾನು ಬೇರೆ ಬೇರೆ ಮದುವೆಯಾಗ ಬೇಕಾದರೆ ಭಾಗೀರಥಿಯು ಸಾಯಲೇ ಬೇಕೆಂದುಕೊಂಡು ಆಕೆಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಈ ಬಗ್ಗೆೆ ತನ್ನ ಸ್ನೇಹಿತ ಮಂಜ ಯಾನೆ ಮಂಜುನಾಥ್ ಅವನೊಡನೆ ವಿಷಯ ತಿಳಿಸಿದ್ದ. ಮಂಜುನಾಥನಿಗೆ ಈ ವಿಷಯ ತಿಳಿಸುತ್ತಿದ್ದಂತೆ ಆತ ಭಾಗೀರಥಿಗೆ ನಾಗರಹಾವಿನ ವಿಷವನ್ನು ಇಂಜೆಕ್ಷನ್ ಮೂಲಕ ಚುಚ್ಚಿ ಆಕೆಯನ್ನು ಕೊಲೆಮಾಡಿದರೆ ಆಕೆಗೆ ಹಾವು ಕಚ್ಚ ಮೃತ ಪಟ್ಟಿದ್ದಾಳೆಂದು ಎಲ್ಲರನ್ನೂ ನಂಬಿಸಬಹುದು ಎಂಬ ಉಪಾಯ ತಿಳಿಸಿದ್ದ. ಮಾತ್ರವಲ್ಲದೆ ಅದಕ್ಕೆೆ ಪೂರಕವಾದ ಸಂಚು ರೂಪಿಸಿದ್ದ.

ಬಳಿಕ ಮಂಜುನಾಥ್ ಹಾಗೂ ನಿರಂಜನ್ ರಾಜ್ ಅರಸ್ ಯಾನೆ ಅಚ್ಚನಿ ಅವರು ಸೇರಿ ಏಡ್ಸ್ ಹಾಗೂ ಕ್ಯಾನ್ಸರ್ ರೋಗಿಗಳ ಚಿಕಿತ್ಸೆೆ ಬಗ್ಗೆೆ ನಾಗರಹಾವಿನ ವಿಷ ಬೇಕಾಗಿದೆ ಎಂದು ತಮ್ಮ ಪರಿಚಯದ ಹಾಸನದ ಹಾವಾಡಿಗ ಕೇಶವನಲ್ಲಿ ಸುಳ್ಳು ಹೇಳಿ ಆತನನ್ನು ನಂಬಿಸಿದ್ದರು.

ಅದರಂತೆ ಕೇಶವನು ನಾಗರಹಾವಿನಿಂದ ವಿಷವನ್ನು ನೀಡಿದ್ದ. ಭಾಗೀರಥಿಯನ್ನು ಕೊಲೆ ಮಾಡುವ ಉದ್ದೇಶದಿಂದ ಮಂಜುನಾಥ ಹಾಗೂ ನಿರಂಜನ್ ರಾಜ್ ಅರಸ್ ನಾಗರಹಾವಿನ ವಿಷವನ್ನು ಸಂಗ್ರಹಿಸಿ ಸುರೇಶ್ ಪ್ರಭುವಿಗೆ ನೀಡಿದ್ದರು.

ತನ್ನ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ಸುರೇಶ್ ಪ್ರಭು 2010ರ ಜ.5ರಂದು ಹಾಸನದ ಜಿಲ್ಲಾ ಸ್ಟೇಡಿಯಂ ಬಳಿ ಸಂಚು ರೂಪಿಸಿದ್ದಾಾನೆ. ಇದನ್ನು ಕಾರ್ಯಗತಗೊಳಿಸಲು ಜ.6ರಂದು ಬೆಳಗ್ಗೆೆ ಮಂಜುನಾಥ್ ನೀಡಿದ್ದ ನಾಗರಹಾವಿನ ವಿಷದಲ್ಲಿ ಸ್ವಲ್ಪ ಒಂದು ಸಿರೀಂಜ್‌ಗೆ ಹಾಕಿ ತಾನೇ ಇಟ್ಟುಕೊಂಡು ಉಳಿದ ವಿಷವನ್ನು ಸಣ್ಣ ಬಾಟಲಿ ಹಾಗೂ ಇನ್ನೊಂದು ಸಿರಿಂಜನ್ನು ಮಂಜುನಾಥನಿಗೆ ನೀಡಿ ಆತನೊಡನೆ ಮಾರುತಿ 800 ಕಾರಿನಲ್ಲಿ ನಿರಂಜನ್ ರಾಜ್ ಅರಸ್, ಬಸವೇ ಗೌಡ, ಪರಮೇಶ ಅವರೊಂದಿಗೆ ಹಾಸನದಿಂದ ಚಿಕ್ಕಮಗಳೂರು ಮಾರ್ಗವಾಗಿ ಹೆಬ್ರಿ ಸಮೀಪದ ಸೋಮೇಶ್ವರಕ್ಕೆೆ ಕರೆದುಕೊಂಡು ಬಂದು ಕಾದು ನಿಲ್ಲುವಂತೆ ಸೂಚಿಸುತ್ತಾಾರೆ. ಈ ಪೈಕಿ ಭಾಗೀರಥಿಗೆ ಕೆಲವೊಬ್ಬರ ಪರಿಚಯವಿರುವುದರಿಂದ ಆಕೆಯ ಎದುರಿಗೆ ಸಿಗಬಾರದೆಂದು ಸುರೇಶ್ ಪ್ರಭು ಸೂಚಿಸಿದ್ದರು.

ಸೋಮೇಶ್ವರ ತಲುಪಿದ ಬಳಿಕ ಮಂಜುನಾಥ ಸಣ್ಣ ವಿಷದ ಬಾಟ್ಲಿಯಲ್ಲಿರುವ ನಾಗರಹಾವಿನ ವಿಷವನ್ನು ತಾನು ಕೊಟ್ಟಂತಹ ಸಿರೀಂಜ್‌ಗೆ ಲೋಡ್ ಮಾಡಿ ನಿರಂಜನ್ ರಾಜ್ ಅರಸ್‌ಗೆ ನೀಡಿ ಭಾಗೀರಥಿಯನ್ನು ಚುಚ್ಚಿ ಕೊಲೆ ಮಾಡುವಂತೆ ಪತಿ ತಿಳಿಸಿದ್ದರು. ಬಳಿಕ ತನ್ನ ಮಾರುತಿ 800 ಕಾರಿನಲ್ಲಿ ತನ್ನ ಪತ್ನಿ ಭಾಗೀರಥಿಯೊಂದಿಗೆ ಧರ್ಮಸ್ಥಳಕ್ಕೆೆ ಹೋಗುವ ಸಲುವಾಗಿ ಹಾಸನದಿಂದ ಹೊರಟು ರಾತ್ರಿ ಭಾಗೀರಥಿಯ ಅಣ್ಣ ಎನ್.ಜಿ.ಸೀತಾರಾಮ ಅವರ ಮನೆಯಾದ ಶಿವಮೊಗ್ಗ ಜಿಲ್ಲೆೆಯ ಹೊಸನಗರ ತಾಲೂಕಿನ, ನಗರಕ್ಕೆೆ ಹೋಗುವ ಕಾರ್ಯಕ್ರಮ ಗೊತ್ತು ಮಾಡಿಕೊಂಡಿದ್ದರೂ ಅಲ್ಲಿಗೆ ಹೋಗದೇ ಭಾಗೀರಥಿಯನ್ನು ಕೊಲೆ ಮಾಡುವ ಉದ್ದೇಶದಿಂದ ಸುರೇಶ್ ಪ್ರಭು ತನ್ನ ಸೋದರ ಮಾವ ಶಂಕರ ಪ್ರಭು ಅವರ ಮನೆಯಾದ ಹೆಬ್ರಿ ಸಮೀಪದ ಬೈಕಾಡಿಯಲ್ಲಿ ಉಳಿದುಕೊಳ್ಳುವ ಎಂದು ಭಾಗೀರಥಿಯನ್ನು ನಂಬಿಸಿ ಶಿವಮೊಗ್ಗದಿಂದ ತೀರ್ಥಹಳ್ಳಿ-ಆಗುಂಬೆ-ಸೋಮೇಶ್ವರ ಮಾರ್ಗವಾಗಿ ಕರೆದುಕೊಂಡು ಬಂದು ರಾತ್ರಿ ಸುಮಾರು 7.45ರಿಂದ 8 ಗಂಟೆಯ ವೇಳೆಗೆ ಹೆಬ್ರಿ ನಡ್ಪಾಾಲುವಿನ ಗ್ರಾಮದ ಸೋಮೇಶ್ವರಕ್ಕೆೆ ತಲುಪಿದಾಗ ಅಲ್ಲಿ ಮಂಜುನಾಥ ಇತರರೊಂದಿಗೆ ಸೇರಿ ಸಣ್ಣ ಬಾಟಲಿಯಲ್ಲಿದ್ದ ನಾಗರಹಾವಿನ ವಿಷವನ್ನು ಸಿರೀಂಜ್‌ಗೆ ಲೋಡ್ ಮಾಡಿ ಭಾಗೀರಥಿಗೆ ಸೋಮೇಶ್ವರದಿಂದ ಮಡಾಮಕ್ಕಿ ರಸ್ತೆೆಯಲ್ಲಿ ಹೋಗುತ್ತ ರಾತ್ರಿ ಸುಮಾರು 8.30ರಿಂದ 9ರ ವೇಳೆಗೆ ನಿರ್ಜನ ಸ್ಥಳದಲ್ಲಿ ನಾಗರಹಾವಿನ ವಿಷ ತುಂಬಿದ್ದ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ್ದರು.

ಭಾಗೀರಥಿ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡ ಆರೋಪಿಗಳು ಕೃತ್ಯಕ್ಕೆೆ ಉಪಯೋಗಿಸಿದ ನಾಗರ ಹಾವಿನ ವಿಷವು ಖಾಲಿಯಾದ 2 ಸಿರಿಂಜ್‌ಗಳು, ಖಾಲಿಯಾದ ನಾಗರಹಾವಿನ ವಿಷದ ಸಣ್ಣ ಬಾಟಲಿ ಮತ್ತು ಟವೆಲ್‌ಗಳನ್ನು ಅಲ್ಲಿಯೇ ರಸ್ತೆೆ ಪಕ್ಕದ ಕಾಡಿನಲ್ಲಿ ಎಸೆದಿದ್ದು, ಬಳಿಕ ಅಲ್ಲಿಂದ ಪರಾರಿಯಾಗಿದ್ದರು.

ಬಳಿಕ ಪತಿ ಸುರೇಶ್ ಪ್ರಭು ತಾನು ನಡೆಸಿದ ಕೊಲೆ ಕೃತ್ಯವನ್ನು ಮರೆಮಾಚುವ ಸಲುವಾಗಿ ಭಾಗೀರಥಿಗೆ ಯಾವುದೋ ವಿಷದ ಹಾವು ಕಚ್ಚಿದೆ ಎಂದು ಆಕೆಯ ಮನೆಯವರನ್ನು ನಂಬಿಸಲು ಭಾಗೀರಥಿಯನ್ನು ಹೆಬ್ರಿಯ ರಾಘವೇಂದ್ರ ಆಸ್ಪತ್ರೆೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆ ಮೃತಪಟ್ಟಿದ್ದಾಾರೆಂದು ವೈದ್ಯರು ತಿಳಿಸಿದ ಬಳಿಕ ಯಾವುದೇ ಸಾಕ್ಷಿ, ಪುರಾವೆ ಸಿಗಬಾರದೆಂಬ ಉದ್ದೇಶದಿಂದ ಯಾವುದೋ ವಿಷದ ಹಾವು ಕಚ್ಚಿ ಆಕೆ ಮೃತಪಟ್ಟಿದ್ದಾಳೆ ಎಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ ಎಂದು ದೋಷಾರೋಪಪಟ್ಟಿ ಸಲ್ಲಿಸಲಾಗಿತ್ತು.

ಈ ಸಾವಿನ ಬಗ್ಗೆೆ ಅನುಮಾನ ಇದ್ದ ಕಾರಣ ಮೃತ ಭಾಗೀರಥಿಯ ಸಹೋದರ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸೂಕ್ತ ತನಿಖೆಗೆ ಆಗ್ರಹಿಸಿದ್ದರು.

ಅದರಂತೆ ಮುಖ್ಯಮಂತ್ರಿಗಳು ಉಡುಪಿ ಜಿಲ್ಲಾ ಎಸ್‌ಪಿ ಅವರಿಗೆ ತನಿಖೆ ಮಾಡುವಂತೆ ಆದೇಶಿಸಿದ್ದರು. ಅನಂತರ ಎಸ್‌ಪಿಯವರು ಡಿಸಿಐಬಿ ಇನ್‌ಸ್ಪೆೆಕ್ಟರ್ ಗಣೇಶ್ ಹೆಗ್ಡೆೆ ಅವರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದರು. ಅದರಂತೆ ತನಿಖೆ ನಡೆಸಿದ ಅವರು ತನಿಖೆ ನಡೆಸಿ ಮೃತರ ಪತಿ ಸುರೇಶ್ ಪ್ರಭು ಹಾಗೂ ಇತರ 6 ಮಂದಿಯ ವಿರುದ್ದ ಪ್ರಕರಣ ದಾಖಲಿಸಿ 57 ಸಾಕ್ಷ್ಯಾಧಾರಗಳನ್ನು ಒಳಗೊಂಡ ಚಾರ್ಜ್‌ಶೀಟ್ ನ್ಯಾಯಾಲಯಕ್ಕೆೆ ಸಲ್ಲಿಸಿದ್ದರು.

ಆರೋಪಿಗಳ ಪರವಾಗಿ ಉಡುಪಿಯ ನ್ಯಾಯವಾದಿ ಎಂ.ಶಾಂತಾರಾಮ ಶೆಟ್ಟಿ ವಾದಿಸಿದ್ದರು.

Leave a Reply

Your email address will not be published. Required fields are marked *

error: Content is protected !!