ಕುಂದಾಪುರ: ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮಹಿಳೆ ಮೃತ್ಯು

ಕುಂದಾಪುರ ಅ.25(ಉಡುಪಿ ಟೈಮ್ಸ್ ವರದಿ): ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಹೊಳೆಬಾಗಿಲು ಮನೆ ಎಂಬಲ್ಲಿ ನಡೆದಿದೆ.

ಬಳ್ಕೂರು ಗ್ರಾಮದ ಪಾರ್ವತಿ ಶೆಡ್ತಿ ಮೃತಪಟ್ಟವರು.

ಇವರು ಅ.24 ರ ಸಂಜೆಯಿಂದ ಅ.25 ರ ಬೆಳಗ್ಗಿನ ಅವಧಿಯಲ್ಲಿ ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಹೊಳೆಬಾಗಿಲು ಮನೆ ಎಂಬಲ್ಲಿ ಮೋನಪ್ಪ ಶೆಟ್ಟಿ ಎಂಬವರ ಮನೆಯ ಕೆರೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂಬುದಾಗಿ ಮೃತರ ಸಹೋದರ ಮೋನಪ್ಪ ಶೆಟ್ಟಿ  ಎಂಬವರು ನೀಡಿದ ದೂರಿನಂತೆ 

ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!