ಮಣಿಪಾಲ: ಗಾಂಜಾ ಸೇವನೆ ಪ್ರಕರಣ-ಮತ್ತೆ 11 ವಿದ್ಯಾರ್ಥಿಗಳು ವಶಕ್ಕೆ

ಮಣಿಪಾಲ ಅ.2(ಉಡುಪಿ ಟೈಮ್ಸ್ ವರದಿ): ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲದ ಎಂ.ಐ.ಟಿ ಪರಿಸರದಲ್ಲಿ 11 ಮಂದಿ ಯುವಕರನ್ನು  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಾದಕ ವಸ್ತು ಸೇವನೆ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಮಣಿಪಾಲದ ಎಂ.ಐ.ಟಿ ಪರಿಸರದಿಂದ ಕೇರಳದ ಎರ್ನಾಕುಲಂ ನ ಸಚಿನ್ ಎಸ್ ಪೈ(21), ಕೆವಿನ್ ಪೀಟರ್ (21), ಮಂಗಳೂರಿನ ಅಕ್ಷಯ್ (21), ಹೈದ್ರಾಬಾದ್ ನ ಚಂದಾ ನಗರದ ವೆಂಕಟ ಗಣೇಶ್ ಕಸ್ತೂರಿ(21), ಬೆಂಗಳೂರಿನ ದೃವ್ ಮಿಲಿಂಡ್ ಪರಬ್ (20), ಪ್ರದ್ಯುಮನ್ (19) ಅಕ್ಷಯ್ ಪಿ(21) ಗುಜರಾತ್ ನ ನಿತ್ಯಮ್ (19), ಹರಿಯಾಣದ ಆರ್ಯನ್ (19), ಬಿಹಾರದ ಮೊಹಮ್ಮದ್ ಅಬ್ದುಲ್ಲ್ಹಾ ವಾಫಿ(21), ಆಂದ್ರ ಪ್ರದೇಶದ ಸರ್ಫರಾಜ್ ಅಹಮದ್ (21) ಎಂಬ 11 ಮಂದಿಯನ್ನು ಮಾದಕ ವಸ್ತು ಸೇವಿಸಿರುವ ಅನುಮಾನದ ಮೇರೆಗೆ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.

ಇವರ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಗಾಂಜಾ ಸೇವಿಸಿರಿವುದು ದೃಢಪಟ್ಟ ಹಿನ್ನೆಲೆಯಲ್ಲಿ11 ಮಂದಿ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ 11 ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!