ಉಡುಪಿಯಲ್ಲಿ ತೀವ್ರಗೊಂಡ ನೀರಿನ ಅಭಾವ

ಉಡುಪಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಲೇ ಇದ್ದು ಬಜೆ ಡ್ಯಾಂ ನಲ್ಲಿ ಕೂಡ ನೀರಿನ ಅಭಾವ ಉಂಟಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು ಕೂಡ ಯಾವುದೇ ಕ್ರಮ‌ ಕೈಗೊಳ್ಳದೇ ಇರುವುದರಿಂದ ಸ್ವತಃ ಶಾಸಕರಾದ ಕೆ ರಘುಪತಿ ಭಟ್ ಅವರೇ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಪಂಪ್ ಅಳವಡಿಸಿದ ಸ್ಥಳಕ್ಕೂ ಭೇಟಿ ನೀಡಿದ ಶಾಸಕರು, ಜನರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಅದೇ ರೀತಿ ಜಿಲ್ಲಾಧಿಕಾರಿಗಳನ್ನು ಕೂಡ ಭೇಟಿ ಮಾಡಿದ ಶಾಸಕರು ನೀರಿನ‌ ಸಮಸ್ಯೆಗೆ ಪರಿಹಾರ ನೀಡುವಂತೆ ಆಗ್ರಹಿಸಿದರು. ‌ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ನಗರಾಢಳಿತದ ಮೂಲಕ ಪ್ರತೀ ವಾರ್ಡ್‌ಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದಾಗಿ ಭರವಸೆ ನೀಡಿದರು ಹಾಗೂ ಬಜೆ ಡ್ಯಾಂ’ನಲ್ಲಿ ಹೂಳೆತ್ತುವ ಕಾರ್ಯ ಕೂಡ ಮಾಡುವುದಾಗಿ ಹೇಳಿದರು. ಈ‌ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಪ್ರಭಾಕರ್ ಪೂಜಾರಿ, ಬಾಲಕೃಷ್ಣ ಶೆಟ್ಟಿ ಕಕ್ಕುಂಜೆ, ಗಿರಿಧರ ಆಚಾರ್ಯ ಕರಂಬಳ್ಳಿ, ಗಿರೀಶ್ ಅಂಚನ್, ರಶ್ಮಿ ಚಿತ್ತರಂಜನ್ ಭಟ್, ಪ್ರಮುಖರಾದ ಚಿತ್ತರಂಜನ್ , ಕಿಶೋರ್ ಕರಂಬಳ್ಳಿ, ದಿನಕರ್ ಪೂಜಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!