ಸವಾಲುಗಳನ್ನು ಧೈರ್ಯದಿಂದ ಎದುರಿಸಿ,ಕೊಂಕಣಿಕಲಾವಿದರನ್ನು ಪ್ರೋತ್ಸಾಹಿಸಿ:ಅಲ್ವಿನ್ದಾಂತಿ

ಸಮಾಜದಲ್ಲಿ ಒಂದು ಸಂಸ್ಥೆಯನ್ನು ಆರಂಭಿಸಿ, ಕಲಾವಿದರನ್ನು ಬೆಳೆಸುವಾಗ ಬಹಳಷ್ಟು ಸವಾಲುಗಳನ್ನು, ಟೀಕೆಗಳನ್ನು, ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಧೃತಿಗೆಡಬೇಡಿ. ಧೈರ್ಯದಿಂದ ಸವಾಲನ್ನು ಸ್ವೀಕರಿಸಿ ಮತ್ತು ಎದುರಿಸಿ ಕೊಂಕಣಿ ಕಲಾವಿದರನ್ನು ಪ್ರೋತ್ಸಾಹಿಸಿ ಎಂದು ಟಿವಿ ನಿರೂಪಕ, ಕಲಾವಿದ ಅಲ್ವಿನ್ ದಾಂತಿ ಮಾತನಾಡಿದರು.

ನಿರಂತರ್ ಉದ್ಯಾವರ ಸಂಘಟನೆಯ ಮೂಲಕ ಕೊಂಕಣಿ ನಾಟಕಗಳು ಹಲವಾರು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಿಗಿಂತ ಹೆಚ್ಚು ಆ ಪರಿಸರಕ್ಕೆ ಗೌರವ ಸಿಗುತ್ತದೆ ಎಂದರು. ನಿರಂತರ ಉದ್ಯಾವರ ಸಂಘಟನೆಯ ನೇತೃತ್ವದಲ್ಲಿ ಉದ್ಯಾವರದ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ವಠಾರದಲ್ಲಿ ಜರಗಿದ ಶಂಕರಪುರದ ಕೊಂಕಣಿ ಕಲಾವಿದರಿಂದ ಕೌಟುಂಬಿಕ ನಾಟಕ ಮಮ್ಮಿ ಮಾಕಾ ಜಾಯಿ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಸಹಾಯಕ ಧರ್ಮಗುರು ವಂದನೀಯ ಫಾ. ರಾಲ್ವಿನ್ ಅರಾನ್ನ ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ಸ್ಟೀವನ್ ಕುಲಾಸೊ ಸ್ವಾಗತಿಸಿ, ಸಂಚಾಲಕರಾದ ಅನಿಲ್ ಡಿಸೋಜ ವಂದಿಸಿದರು. ಒಲಿವಿರಾ ಮತಾಯಸ್ ಕಾರ್ಯಕ್ರಮ ನಿರೂಪಿಸಿದರು.
 ನಾಟಕದ ರಚನೆ ವಾಲ್ಸ್ಟನ್ ಡೇಸಾ ಶಂಕರಪುರ ಮತ್ತು ನಿರ್ದೇಶಿಸಿದ ಗಣೇಶ್ ರಾವ್ ಎಲ್ಲೂರು ಅವರನ್ನು ಅತಿಥಿಗಳು ಸನ್ಮಾನಿಸಿದರು.

Leave a Reply

Your email address will not be published. Required fields are marked *

error: Content is protected !!