ಯೋಧ ಉದಯ್ ಪೂಜಾರಿ ಸ್ಮಾರಕ ಪ್ರತಿಮೆಗೆ ಚಾಲನೆ

ಹೆಬ್ರಿ : ಸೇನೆಯ ಕರ್ತವ್ಯ ಅವಧಿಯಲ್ಲಿ ವೀರಮರಣಹೊಂದಿದ ಹೆಬ್ರಿ ಮೂಲದ ಉದಯ ಪೂಜಾರಿಯವರ ಸ್ಮಾರಕ ಪ್ರತಿಮೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಹೆಬ್ರಿಯಲ್ಲಿ ವೀರ ಯೋಧ ಉದಯ ಪೂಜಾರಿಯವರ ಸ್ಮಾರಕ ನಿರ್ಮಿಸಬೇಕು ಅನ್ನೋದು ಕೆಲ ವರ್ಷಗಳಿಂದ ಒಕ್ಕೊರಲ ಒತ್ತಾಯವಾಗಿದ್ದು ಇದೀಗ ಹೆಬ್ರಿ ಕಾರ್ಕಳದ ಮಾರ್ಗವಾಗಿರುವ ಚತುಷ್ಪಥ ರಸ್ತೆಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ.

ಇತ್ತೀಚಿಗೆ ನಿರ್ಮಾಣವಾಗಿರುವ ಈ ರಸ್ತೆಯನ್ನು ಕೆಲ ತಿಂಗಳುಗಳ ಹಿಂದೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಉದ್ಘಾಟಿಸಿದ್ದು ಇದೀಗ ಹೆಬ್ರಿ, ತಾಣ, ಬೀಡಿನ ಯುವಪಡೆ ಶ್ರಮದಾನ ಮಾಡುವ ಮೂಲಕ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಚಾಲನೆ ಕೊಟ್ಟಿದೆ. ಉದಯ ಪೂಜಾರಿ ಕೇವಲ ವೀರಯೋಧ ಮಾತ್ರವಲ್ಲ,ನಮ್ಮೂರಿಗೆ ಕಳಸವಿದ್ದಂತೆ.

ತಾಯಿ ಭಾರತಿಗೆ ಅವರ ಸೇವೆ, ಬಲಿದಾನ ನಮ್ಮ ಮುಂದಿನ ಪೀಳಿಗೆಗೂ ತಿಳಿಯಬೇಕು. ಆ ಕಾರಣಕ್ಕೆ ಪ್ರತಿಮೆ ಹಾಗೂ ಸ್ಮಾರಕ ನಿರ್ಮಾಣ ಮಾಡುತ್ತಿದ್ದೇವೆ. ಪ್ರತಿಮೆಯ ಕೆಲಸವೂ ಬಹುತೇಕ ಮುಗಿದಿದ್ದು ಕೆಲವೇ ದಿನಗಳಲ್ಲಿ ಕೆಲಸ ಸಂಪೂರ್ಣವಾಗಿ ನಡೆಲಿದೆ ಎಂದು ಯೋಧ ಸಚಿನ್ ಶೆಟ್ಟಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!