“ಟೈಮ್ ಈಸ್ ಓವರ್, ಐಯಮ್ ಕಮಿಂಗ್ ಗಾಡ್” ವ್ಯಾಟ್ಸಪ್ ಸ್ಟೇಟಸ್ ಹಾಕಿ ವಿಷ ಕುಡಿದ!


ಕಾರ್ಕಳ:ನಾನು ಬದುಕುವ ‘ಸಮಯ ಮುಗಿದೆ, ದೇವರೆ ನಾನು ನಿನ್ನಲ್ಲಿಗೆ ಬರುತ್ತಿದ್ದೇನೆ’ ಎಂದು ವ್ಯಾಟ್ಸಪ್ ಸ್ಟೇಟಸ್ ಅಪ್‌ಲೊಡ್ ಮಾಡಿ ವಿದ್ಯಾರ್ಥಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಶರಣಾದ ಘಟನೆ ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದಿದೆ. ಕಾರ್ಕಳ ಎಂಪಿಎಂ ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿ ಹರೀಶ್ (20)

ಆತ್ಮಹತ್ಯೆ ಮಾಡಿಕೊಂಡಾತವನು. ಹರೀಶ್ ಶುಕ್ರವಾರ ಮನೆಯಿಂದ ಕಾಲೇಜ್ ಗೆಂದು ಹೊರಟಿದ್ದ ಆದರೆ ತರಗತಿಗೆ ಹಾಜರಾಗಿರಲಿಲ್ಲ, ಮಧ್ಯಾಹ್ನ ತನ್ನ ಸ್ನೇಹಿತನೊಂದಿಗೆ ಹರೀಶ್ ಬೈಕ್‌ನಲ್ಲಿ ದೂಪದಕಟ್ಟೆಯತ್ತ ಹೋಗಿದ್ದ, ಆದರೆ ಅತ್ತೂರು ಸಮೀಪಿಸುತ್ತಿದ್ದಂತೆ ಬೈಕ್ ನಿಲ್ಲಿಸುವಂತೆ ಸ್ನೇಹಿತನಲ್ಲಿ ಹೇಳಿ ಅಲ್ಲೇ ಇಳಿದು ಸ್ನೇಹಿತನಿಗೆ ಮುಂದುವರಿಯುವಂತೆ ತಿಳಿಸಿದ್ದಾನೆ.


ಸ್ನೇಹಿತ ಸ್ವಲ್ಪ ದೂರ ಹೋಗಿ ಮರಳಿ ಬಂದಿದ್ದು, ಈ ವೇಳೆ ಹರೀಶ್ ರಸ್ತೆಯಲ್ಲಿ ಹೊರಳಾಡುತ್ತಿದ್ದ. ಗಾಬರಿಗೊಂಡ ಸ್ನೇಹಿತ ತಕ್ಷಣ ಸ್ಥಳೀಯರ ಸಹಕಾರದೊಂದಿಗೆ ಆತನನ್ನು ಉಡುಪಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಬೆಳ್ಮಣ್ ತಲುಪುವಾಗ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.

ಕಬ್ಬಡ್ಡಿ ಕ್ರೀಡೆಯಲ್ಲಿ ಸಕ್ರಿಯನಾಗಿದ್ದ ಹರೀಶ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ವಿಷ ಸೇವಿಸುವ ಮುನ್ನ,” ಜೀವನ ಅಂದ್ರೆ ಏನಂತ ಚೆನ್ನಾಗಿ ತಿಳಿದುಕೊಂಡೆ ಎಂದು ಬರೆದುಕೊಂಡಿದ್ದಾನೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!