ಮಣಿಪಾಲ:ಭತ್ತ ಸಾಗಿಸುತ್ತಿದ್ದ ಲಾರಿ ಪಲ್ಟಿ

ಮಣಿಪಾಲ: ಇಂದು ಮುಂಜಾನೆ ಕಾರ್ಕಳಕ್ಕೆ ಭತ್ತ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ನಡೆದಿದೆ.


ಬೆಳಿಗ್ಗೆ 7 ಗಂಟೆ ಸುಮಾರಿಗೆ ಮಣಿಪಾಲ ಮುಖ್ಯ ರಸ್ತೆಯಲ್ಲಿ ಅರೆಬರೆ ಹೆದ್ದಾರಿ ಕಾಮ ಗಾರಿಯಿಂದ ಎದುರಿಗೆ ಬಂದ ಬೈಕ್‌ವೊಂದನ್ನು ತಪ್ಪಿಸಲು ಹೋಗಿ ಲಾರಿಯ ಚಕ್ರ ಕಾಂಕ್ರಿಟ್ ರಸ್ತೆಯಿಂದ ಕೆಳಗೆ ಜಾರಿದ ಪರಿಣಾಮ ಲಾರಿ ಉರುಳಿಬಿತ್ತು. ಲಾರಿಯು ಹಳಿಯಾಳದಿಂದ ಕಾರ್ಕಳ ರೈಸ್ ಮಿಲ್‌ಗೆ ಭತ್ತವನ್ನು ಸಾಗಿಸುತಿತ್ತು. ಅಪಘಾತದಿಂದ ಲಾರಿ ಚಾಲಕ ಸಣ್ಣ ಪುಟ್ಟ ಗಾಯದಿಂದ ಪರಾಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!