ಎಡಮೊಗೆಯಲ್ಲಿ 2 ವರ್ಷದ ಹೆಣ್ಣು ಮಗುವಿನ ಅಪಹರಣ

ಕುಂದಾಪುರ: ಇಂದು ಮುಂಜಾನೆ ಹೆಣ್ಣು ಮಗುವನ್ನು ಅಪಹರಿಸಿಕೊಂಡು ಪರಾರಿಯಾದ ಘಟನೆ ಕುಂದಾಪುರದ ಎಡಮೊಗೆಯಲ್ಲಿ ನಡೆದಿದೆ.

ಎಡಮೊಗೆಯ ಅತ್ಯಂತ ಗ್ರಾಮೀಣ ಪ್ರದೇಶವಾದ ಕುಮ್ಟಿಬೇರು ನಿವಾಸಿ ಸಂತೋಷ ನಾಯ್ಕ್ ಅವರ ಎರಡು ವರ್ಷದ ಮಗಳಾದ ಸ್ವಾನಿತ್ ನಾಯ್ಕ್‌ನ್ನು

ಅಪಹರಿಸಿಕೊಂಡು ತುಂಬಿ ಹರಿಯುವ ಕುಬ್ಜಾ ನದಿ ದಾಟಿ  ಹೊಸಂಗಡಿಯತ್ತಾ ಪರಾರಿಯಾಗಿದ್ದು, ಇಬ್ಬರು ಅಪರಿಚಿತರಿಂದ ನಡೆದ ಕೃತ್ಯ ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಉಡುಪಿ ಎಸ್‌ಪಿ ನಿಶಾ ಜೇಮ್ಸ್, ಡಿವೈಎಸ್ಪಿ ದಿನೇಶ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!