ಲಯನ್ಸ್ ಕ್ಲಬ್ ವತಿಯಿಂದ ವಿಜೇತ ವಿಶೇಷ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಕಾರ್ಕಳ : ಲಯನ್ಸ್ ಜಿಲ್ಲೆ 317 ಸಿ ವತಿಯಿಂದ ವಿಜೇತ ವಿಶೇಷ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ವಿಜೃಂಭಣೆಯಿಂದ ನೆರವೇರಿತು.

ಜಿಲ್ಲಾ ರಾಜ್ಯಪಾಲರು ಲಯನ್ ಪಿಎಂಜೆಎಫ್ ವಿ ಜಿ ಶೆಟ್ಟಿg ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಲೆಗೆ ದೇಣಿಗೆ ನೀಡಿ ಶುಭ ಹಾರೈಸಿದರು. ಡಾ. ಕಾಂತಿ ಹರೀಶ್ ದಂಪತಿಗಳಿಗೆ ಗೌರವ ಸಮರ್ಪಿಸುವ ಜತೆಗೆ ವಿಜೇತ ಶಾಲಾ ಎಲ್ಲ ಸಿಬ್ಬಂದಿಯವರಿಗೆ ಉಡುಗೊರೆಗಳನ್ನು ನೀಡುವ ಜತೆಗೆ ಹೂವನ್ನು ನೀಡಿ ಗೌರವಿಸಿದರು. ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆಯೊಂದಿಗೆ ಹಣ್ಣು ಹಂಪಲು ಹಾಗೂ ಸಿಹಿ ತಿಂಡಿ ವಿತರಿಸಿದರು.

ಈ ಸಂದರ್ಭದಲ್ಲಿ ಕ್ಯಾಲೆಂಡರ್ ಆಫ್ ಇವೆಂಟ್ಸ್ ಲಯನ್ ಪಿಎಂಜೆಎಫ್ ಪ್ರಕಾಶ್ಚಂದ್ರ, ಪ್ರೊಜೆಕ್ಟ್ ಕೋರ್ಡಿನಟರ್ ಲಯನ್ ಹನೀಫ್ ಸಾಹೇಬ್, ರಿಜನಲ್ ಚೈರ್ ಪರ್ಸನ್ ಲಯನ್ ಹರ್ಷ ಶೆಟ್ಟಿ ,ಬೆಲ್ಮನ್ ಕ್ಲಬ್ ಅಧ್ಯಕ್ಷರು ಲಯನ್ ವಿ ಕೆ ರಾವ್, ಝೋನ್ ಚೈರ್ ಪರ್ಸನ್ ಲಯನ್ ಶಶಿಧರ್ ಶೆಟ್ಟಿ, ಲಯನ್ ವಿಶ್ವನಾಥ್ ಪಾಟ್ಕರ್, ಲಯನ್ ಸದಾನಂದ್ ಶೆಟ್ಟಿಗಾರ್, ಲಯನ್ ಶಂಕರ್ ಶೆಟ್ಟಿ ,ಲಯನ್ ಹರೀಶ್ ಅಧಿಕಾರಿ , ಲಯನ್ ವಲೇರಿಯನ್ ಡಿಸೋಜಾ, ಲಯನ್ ಅನಿತಾ ಡಿಸೋಜಾ, ಶ್ರೀ ಗಣೇಶ್, ಲಯನ್ ರಮಾನಾಥ್,ಶ್ರೀಮತಿ ರಾಧಿಕಾ, ಶ್ರೀ ರಜನೀಶ್ ರಾವ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!