ಅರೆಶಿರೂರು ಇಳಿಯದ ಹೆಲಿಕಾಪ್ಟರ್ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ಹೊರಟ ಶ್ರೀಲಂಕಾ ಪ್ರಧಾನಿ

ಹವಾಮಾನ ವೈಪರೀತ್ಯದಿಂದಾಗಿ ಶ್ರೀಲಂಕಾ ಪ್ರಧಾನಿ ಕೊಲ್ಲೂರು ಭೇಟಿಗೆ ಹೆಲಿಕಾಪ್ಟರ್ ಇಳಿಯಲು ಆಗದೆ ಮಂಗಳೂರಿನಿಂದ ರಸ್ತೆ ಮೂಲಕ ಹೋರಟ ಪ್ರಧಾನಿ.11 ಗಂಟೆಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.ಬೆಳಿಗ್ಗೆ ಮೂಕಾಂಬಿಕಾ ದೇವಿಯ ಪೂಜೆ ,ನಂತರ ಚಂಡಿಕಾಯಾಗದಲ್ಲಿ ಪಾಲ್ಗೊಳ್ಳುವರು.

ಶ್ರೀಲಂಕಾ ಪ್ರಧಾನಿ ರನಿಲ್‌ ವಿಕ್ರಮ ಸಿಂಘೆ ಅವರು ಭೇಟಿ ನೀಡುವ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಬಂದೋ ಬಸ್ತ್ ಮಾಡಲಾಗಿದೆ. ಗುರುವಾರ ಮಂಗಳೂರಿನಿಂದ ಕೊಲ್ಲೂರಿನವರೆಗೆ ಎಸ್ಕಾರ್ಟ್‌ ವಾಹನಗಳ ಪೂರ್ವಭಾವಿ ಪರೇಡ್‌ ನಡೆಯಿತು.

ಇದರ ಪೂರ್ವಭಾವಿಯಾಗಿ ಗುರುವಾರ ಮಂಗಳೂರು ವಿಮಾನ ನಿಲ್ದಾಣದಿಂದ ಕೊಲ್ಲೂರು ದೇವಸ್ಥಾನ ದವರೆಗೆ ಎಸ್ಕಾರ್ಟ್‌ ವಾಹನ, ಬೆಂಗಾವಲು ವಾಹನ, ಆ್ಯಂಬುಲೆನ್ಸ್‌, ಭದ್ರತಾ ಪಡೆಗಳ ವಾಹನ ಸಹಿತ ಸುಮಾರು 15ಕ್ಕೂ ಹೆಚ್ಚು ವಾಹನಗಳ ಪರೇಡ್‌ ನಡೆಸಲಾಯಿತು.

ಡಿಸಿ ಭೇಟಿ ಭದ್ರತೆ ಪರಿಶೀಲನೆ

Leave a Reply

Your email address will not be published. Required fields are marked *

error: Content is protected !!