ಭೀಕರ ಮಳೆ ನಿಲ್ಲುವಂತೆ ನಾಗರಿಕ ಸಮಿತಿಯಿಂದ ನಾಳೆ “ಚಿತ್ರಾನ್ನ ಸೇವೆ” : ಒಳಕಾಡು

ಉಡುಪಿ: ಕೆಲವು ದಿನಗಳಿಂದ ಸುರಿಯುತ್ತಿರುವ ಅತಿವೃಷ್ಠಿಯಿಂದ ಜನ-ಜೀವನ ಅಸ್ತವ್ಯಸ್ಥಗೊಂಡಿದೆ. ಪ್ರಾಕೃತಿಕ ವಿಕೋಪಗಳು ನಡೆದಿವೆ. ಮಳೆ ಸಮತೋಲನ ಸ್ಥಿತಿಗೆ ಬರುವಂತೆ ಪ್ರಾರ್ಥಿಸಿ, ಉಡುಪಿ ರಥಬೀದಿಯ ಶ್ರೀಅನಂತೇಶ್ವರ ದೇವಸ್ಥಾನದಲ್ಲಿ ಹಿರಿಯರ ಮಾರ್ಗದರ್ಶನದಂತೆ, ವಿಶೇಷವಾಗಿ “ಚಿತ್ರಾನ್ನ ಸೇವೆ”ಯು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಆಯೋಜನೆಯಲ್ಲಿ ನಾಳೆ (ಅ.14) ಬುಧವಾರ ಸಂಜೆ 6- 20 ಕ್ಕೆ ಸರಿಯಾಗಿ ನಡೆಯಲಿದೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಮತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂನ್ ಎರಡನೇ ವಾರದವರೆಗೂ  ಉಡುಪಿ ಯಲ್ಲಿ  ಮಳೆ ಬಾರದ ಕಾರಣ ಇದೇ ನಾಗರಿಕ ಸಮಿತಿಯಿಂದ ಕಪ್ಪೆಗೆ ಮದುವೆ ಮಾಡ ಲಾಗಿತ್ತು.

Leave a Reply

Your email address will not be published. Required fields are marked *

error: Content is protected !!