ನನ್ನ ಮೇಲಿನ ದಾಳಿಗೆ ಸೋನಿಯಾ ಗಾಂಧಿಯೇ ನೇರ ಕಾರಣ:ಅರ್ನಾಬ್

ಮುಂಬೈ: ಕೆಲಸ ಮುಗಿಸಿ ಕಾರಿನಲ್ಲಿ ಮನೆಗೆ ಹೊರಟ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತು ಅವರ ಪತ್ನಿ ಸನಿಯಾ ಗೋಸ್ವಾಮಿ ವಿರುದ್ಧ ನಡೆದ ದಾಳಿಗೆ ಸಂಬಂಧಿಸಿದಂತೆ ಸ್ವತಃ ಅರ್ನಾಬ್ ಗೋಸ್ವಾಮಿಯವರೇ ವಿಡಿಯೊ ಸಂದೇಶದ ಮೂಲಕ ಟ್ವೀಟ್ ಮಾಡಿದ್ದಾರೆ.

ತಮ್ಮ ಮೇಲೆ ನಡೆದ ದಾಳಿ ಬಗ್ಗೆ ವಿವರಣೆ ನೀಡಿದ ಅವರು, ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ನಸುಕಿನ ಜಾವ ತಾವು ಕಾರಿನಲ್ಲಿ ಹೋಗುತ್ತಿದ್ದಾಗ ಏಕಾಏಕಿ ಬಂದು ತಮ್ಮ ಕಾರಿನ ಕಿಟಕಿಗಳ ಮೇಲೆ ಒಂದೇ ಸಮನೆ ಹೊಡೆದು ದಾಳಿ ಮಾಡಲು  ಆರಂಭಿಸಿದರು. ನನಗೆ ಒಂದು ಪಾಠ ಕಲಿಸಬೇಕೆಂದು ಪಕ್ಷದ ಮೇಲಿನ ನಾಯಕರಿಂದ ಸೂಚನೆ ಪಡೆದು ಕಾರ್ಯಕರ್ತರು ಈ ರೀತಿ ಕೆಟ್ಟ ವರ್ತನೆ ತೋರಿಸಿದ್ದಾರೆ ಎಂದು ಹೇಳಿದ್ದಾರೆ.

ನಂತರ ನೇರವಾಗಿ ಸೋನಿಯಾ ಗಾಂಧಿ ಹೆಸರು ಪ್ರಸ್ತಾಪಿಸಿದ ಅವರು, ನೀವು ನನ್ನ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ್ದೀರಿ. ನನ್ನ ಮೇಲಿನ ದಾಳಿಗೆ ನೀವೇ ಕಾರಣ, ಹೀಗೆ ಹೇಡಿಯಂತೆ ಇನ್ನೊಬ್ಬರಿಗೆ ಸೂಚನೆ ನೀಡಿ ದಾಳಿ ಮಾಡಿಸಬೇಡಿ, ಸಾಧ್ಯವಾದರೆ ನನ್ನನ್ನು ಮುಖಾಮುಖಿ ಎದುರಿಸಿ ಎಂದು ತಮ್ಮ 5 ನಿಮಿಷ 50 ಸೆಕೆಂಡುಗಳ ವಿಡಿಯೊದಲ್ಲಿ ಸೋನಿಯಾ ಗಾಂಧಿಯವರಿಗೆ ಸವಾಲು ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!