ಸೆಲ್ಫಿ ಕ್ರೇಜ್ – ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ಯುವಕನ ರಕ್ಷಣೆ

ಮುರುಡೇಶ್ವರ : ಕೆಲ ದಿನಗಳಿಂದ ಜಿಲ್ಲೆಯಲ್ಲಿ ಮುಂಗಾರು ಮಳೆ ಬಿರುಸುಗೊಂಡು ಕಡಲಿನಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಉತ್ತರಕನ್ನಡ ಜಿಲ್ಲೆಯ  ಪ್ರಸಿದ್ಧ ಮುರುಡೇಶ್ವರ ಕಡಲ ಕಿನಾರೆಯಲ್ಲಿ ಪ್ರವಾಸಿಗನೊರ್ವ ಸೆಲ್ಫಿ ತೆಗೆಯಲು ಕಡಲಿಗಿಳಿದು ಅಲೆಗೆ ಅಬ್ಬರಕ್ಕೆ ಮೈಸೂರು ಮೂಲದ ಪ್ರವಾಸಿಗ ಅನಿಲ್ (೩೦) ಕೊಚ್ಚಿಹೋಗಿದ್ದಾನೆ. ಸಮುದ್ರದಲ್ಲಿ ಮುಳುಗುವ ಸಂಧರ್ಭ ಸ್ಥಳೀಯ ಲೈಫ್‌ಗಾರ್ಡ್ಸ ಮತ್ತು ಪೋಲಿಸರು ರಕ್ಷಣೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಯುವಕನನ್ನು ಭಟ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪ್ರಕರಣ ಮುರ್ಡೇಶ್ವರ ಠಾಣೆಯಲ್ಲಿ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!