ಸೌದಿಯಲ್ಲಿ ರಸ್ತೆ ಅಪಘಾತ: ಪಡುಬಿದ್ರಿಯ ಯುವಕ ಮೃತ್ಯು

ಉಡುಪಿ: ಸೌದಿಯಲ್ಲಿ ನಡೆದ ಅಪಘಾತವೊಂದರಲ್ಲಿ ಪಡುಬಿದ್ರಿಯ ಯುವಕನೋರ್ವ ಮೃತಪಟ್ಟಿದ್ದಾನೆ.
ಪಡುಬಿದ್ರಿಯ ಕಂಚಿನಡ್ಕ ನಿವಾಸಿ ಹಂಝ್ ಎಂಬವರ ಪುತ್ರ ಅಬ್ದುಲ್ ಖಾದರ್ (35) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ. ಈತ ಸೌದಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ಪ್ರಯಾಣಿಸುತಿದ್ದಾಗ ಹೈಲ್‌ನ 180 ಕಿ.ಮೀ ದೂರದಲ್ಲಿ ವೇಗದಲ್ಲಿ ಸಂಚರಿಸುತಿದ್ದಾಗ ಕಾರಿನ ಟವರ್ ಸ್ಪೋಟಗೊಂಡು ಅಪಘಾತ ಸಂಭವಿಸಿದೆಂದು ಮಾಹಿತಿ ಲಭಿಸಿದೆ. ತೀವ್ರ ಗಾಯ ಗೊಂಡ ಖಾದರ್‌ನನ್ನು ಆಸ್ಪತ್ರೆಗೆ ದಾಖಲಾಗಿಸಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ತಡ ರಾತ್ರಿ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!