ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರಕ್ಕೆ ಶಾಸಕ ನಾಯ್ಕ್ ಹಠಾತ್ ಭೇಟಿ

ಬಂಟ್ವಾಳ: ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್ ಅವರು ಬುಧವಾರ ಸಂಜೆ ಹಠಾತ್  ಭೇಟಿ ನೀಡಿ ಪರಿಶೀಲನೆ ನಡೆಸಿದರು‌.ಈ ಸಂದರ್ಭದಲ್ಲಿ  ಸ್ಥಳೀಯರು ಆಸ್ಪತ್ರೆ  ಸಮಸ್ಯೆಗಳ ಬಗ್ಗೆ  ಶಾಸಕರ ಗಮನಕ್ಕೆ ತಂದರಲ್ಲದೆ ಪೂರ್ಣಾವಧಿ ವೈದ್ಯರೊಬ್ಬನ್ನು ನೇಮಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. 

ವಾರಕ್ಕೆ ಎರಡು ಬಾರಿ  ಮಾತ್ರ ಇಲ್ಲಿ  ವೈದ್ಯರು ಲಭ್ಯರಿದ್ದು, ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ಶಾಸಕರಲ್ಲಿ ಅಳಲು ತೋಡಿಕೊಂಡರು. ಹೆದ್ದಾರಿಯಲ್ಲಿರುವ  ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದಲ್ಲಿ ಅಪಘಾತ ಸಹಿತ ಅನೇಕ ಘಟನೆಗಳ ಸಂದರ್ಭದಲ್ಲಿ ಅನುಕೂಲವಾಗುವ ದೆಸೆಯಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆ ಗೇರಿಸುವ ನಿಟ್ಟಿ ಅಗತ್ಯ ಕ್ರಮಕೈಗೊಳ್ಳುವಂತೆ  ಮನವಿ ಮಾಡಿದರು.

ಜನರ ಅಹುವಾಲಿಗೆ ಸ್ಪಂದಿಸಿದ ಶಾಸಕ ಯು.ರಾಜೇಶ್ ನಾಯ್ಕ್  ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾತ್ಕಾಲಿಕ ನೆಲೆಯಲ್ಲಿ ಬೇರೆ ವೈದ್ಯರೊಬ್ಬರನ್ನು ನೇಮಕ ಮಾಡಲು ಕ್ರಮಕೈಗೊಳ್ಳಲಾಗುವುದು ಭರವಸೆ ನೀಡಿದರಲ್ಲದೆ  ಈ ಆಸ್ಪತ್ರೆಯನ್ನು 33 ಬೆಡ್ ನ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ   ಆರೋಗ್ಯ ಸಚಿವರೊಂದಿಗೆ ಚರ್ಚಿಸುವ ಮತ್ತು ಇದು ಕಾರ್ಯರೂಪಕ್ಕೆ ಬರುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಆಸ್ಪತ್ರೆಯಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಂಡು ಬಂದಿರುವ ಸಿಬಂದಿಗಳ ಕಾರ್ಯ ವನ್ನು ಶಾಸಕರು ಶ್ಲಾಘಿಸಿದರು. ಜಿಪಂ.ಸದಸ್ಯ ತುಂಗಪ್ಪ ಬಂಗೇರ,ಪಿಲಾತಬೆಟ್ಟು ಗ್ರಾ.ಪಂ.ಅದ್ಯಕ್ಷ ಚಂದ್ರಶೇಖರ್ ಶೆಟ್ಟಿ , ತಾ.ಪಂ.ಸದಸ್ಯ ರಮೇಶ್ ಕುಡುಮೇರು,ಗ್ರಾ.ಪಂ.ಸದಸ್ಯರಾದ ಲಕ್ಮೀ ಜೆ ಬಂಗೇರ, ಪಿಲಾತಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಲಕ್ಮೀನಾರಾಯಣ ಉಡುಪ,  ಡಾ| ಸೋಹನ್ ಕುಮಾರ್  ಮತ್ತು ಸಿಬ್ಬಂದಿಗಳು ಮತ್ತಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!