ನೀಲಾವರ ಗೋಶಾಲೆಯ ಗೋವುಗಳಿಗೆ ದೇಣಿಗೆ ಸಂಗ್ರಹ

ಶ್ರೀ ಕೃಷ್ಣ  ಮಠದ ರಥಬೀದಿಯಲ್ಲಿ ನಡೆದ  ವಿಟ್ಲಪಿಂಡಿ ಉತ್ಸವದಂದು ಪೇಜಾವರ ಮಠಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿರಯುವ ನೀಲಾವರ ಗೋಶಾಲೆಯ ಸುಮಾರು 1500 ಗೋವುಗಳಿಗೆ  ಜಿಲ್ಲಾ ಯುವಬ್ರಾಹ್ಮಣ ಪರಿಷತ್ತಿನ ಸದಸ್ಯರು ಹಾಗೂ ಭಕ್ತಾಧಿಗಳಿಂದ ದೇಣಿಗೆ ಸಂಗ್ರಹವನ್ನು 10 ವರ್ಷಗಳಿಂದ ಮಾಡುತ್ತಿದ್ದು, ಈ ವರ್ಷ ಪರ್ಯಾಯ  ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು,ಅದಮಾರು ಕಿರಿಯ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ದೇಣಿಗೆ ಹಾಕುವ  ಮೂಲಕ ಚಾಲನೆ ನೀಡಿದರು.

ಪರಿಷತ್ತಿನ ಅಧ್ಯಕ್ಶರಾದ ವಿಷ್ಣು ಪಾಡಿಗಾರ್,ಕಾರ್ಯದರ್ಶಿ ಪ್ರವೀಣ್ ಉಪಾದ್ಯಾಯ,ಕುಮಾರಸ್ವಾಮಿ ಉಡುಪ,ನೀಲಾವರ ಗೋಶಾಲೆಯ ಟ್ರಷ್ಟಿ  ಮಟ್ಟು  ಲಕ್ಷ್ಮೀನಾರಾಯಣ ರಾವ್ ಹಾಗೂ ಶ್ರೀ ಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯ ಭುವನೇಂದ್ರ ಕಿದಿಯೂರು,ಪರ್ಯಾಯ ಮಠದ ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್  ಮೊದಲಾದವರು ಉಪಸ್ಥಿತರಿದ್ದರು.  

Leave a Reply

Your email address will not be published. Required fields are marked *

error: Content is protected !!