ಮುರುಡೇಶ್ವರ:ಉಕ್ಕೇರಿದ ಕಡಲು ಭೀತಿಯಲ್ಲಿ ಜನತೆ

ಕಾರವಾರ :- ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನಲೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ವರುಣನ ಅಬ್ಬರ ಹೆಚ್ಚಾಗಿದೆ. ಮಲೆನಾಡು ಭಾಗದಲ್ಲಿ ಬಾರಿ ಮಳೆಯಿಂದಾಗಿ ಶರಾವತಿ ನದಿ ಉಕ್ಕಿ ಹರಿಯುತಿದ್ದ ಹಿನ್ನಲೆ ಹೊನ್ನಾವರ ಬಂದರು ಸಂಪೂರ್ಣ ಜಲಾವೃತವಾಗಿದೆ.ಇನ್ನು ಸಮುದ್ರದ ಅಬ್ಬರಕ್ಕೆ ಮುರುಡೇಶ್ವರ ಕಡಲ ತೀರ ಜಲಾವೃತವಾಗಿದ್ದು ಅಂಗಡಿ ಮುಂಗಟ್ಟುಗಳು ನೀರಿಗಾಹುತಿಯಾಗಿದೆ.

ಇನ್ನೂ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಕರಾವಳಿ ಮೀನುಗಾರಿಕೆ ಸ್ಥಗಿತ ಗೊಂಡಿದ್ದು ಮೀನುಗಾರರಿಗೆ ಸಮುದ್ರಕ್ಕೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದು ಕಾರವಾರ ಹೊನ್ನಾವರ, ತದಡಿ ಬಂದರುಗಳು ಸೇರಿದಂತೆ ಕರ್ನಾಟಕ, ಗೋವಾ ಮೀನುಗಾರಿಕಾ ಬೋಟ್ ಗಳು ಲಂಗುರು ಹಾಕಿ ಆಶ್ರಯ ಪಡೆದಿದೆ.ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇನ್ನೂ ಮೂರು ದಿನ ಹೆಚ್ಚಿನ ಮಳೆಯಾಯಲಿದೆ. ಹೀಗಾಗಿ ಈ ಭಾಗದ ನದಿಗಳು ಉಕ್ಕಿ ಹರಿಯುವ ಸಾಧ್ಯತೆ ಹೆಚ್ಚಿದ್ದು ಕದ್ರಾ ,ಲಿಂಗನಮಕ್ಕಿ , ಗೇರುಸೊಪ್ಪ ಸೇರಿದಂತೆ ಜಿಲ್ಲೆಯ ಪ್ರಮುಖ ಜಲಾಶಯ ಭಾಗದ ತಗ್ಗು ಪ್ರದೇಶದ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ಹೋಗುವುದು ಒಳಿತು.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದರಿಂದ ಅಲೆಗಳ ಅಬ್ಬರ ಹೆಚ್ಚಾಗುತಿದ್ದು ಮೀನುಗಾರಿಕೆಗೆ ಮೀನುಗಾರರು ತೆರಳದಂತೆ ಸೂಚನೆ ನೀಡಲಾಗಿದೆ.ಕರಾವಳಿ ಭಾಗದ ಮಂಗಳೂರು ,ಉಡುಪಿ ಭಾಗದಲ್ಲಿ ರೆಡ್ ಅಲರ್ಟ ಇದ್ದು ಉತ್ತರ ಕನ್ನಡ ಭಾಗದಲ್ಲಿ ಆರೆಂಜ್ ಅಲರ್ಟ ಘೋಷಿಸಲಾಗಿದೆ. ಕಾರವಾರ ದಿಂದ ಕುಮಟಾ ಭಾಗದ ಸಮುದ್ರ ತಂಡದಲ್ಲಿ ಹೆಚ್ಚು ತೊಂದರೆ ಆಗದಿದ್ದರೂ ಹೊನ್ನಾವರ ,ಭಟ್ಕಳ ಭಾಗದ ಕಡಲ ಭಾಗದಲ್ಲಿ ಹೆಚ್ಚಿನ ತೊಂದರೆಯಾಗುವ ಸಾಧ್ಯತೆ ಗಳಿವೆ.

Leave a Reply

Your email address will not be published. Required fields are marked *

error: Content is protected !!