ಮಲ್ಪೆ: ಮೃತ್ಯು ಗುಂಡಿ ಮುಚ್ಚಿದ ಯುವಕರ ತಂಡ

ಉಡುಪಿ: ವಿಕೆಂಡ್ ಬಂದರೆ ಸಾಕು ಯುವಕರ ತಂಡ ಮೋಜು ಮಸ್ತಿ ಎಂದು ಎಂಜೋಯಿಮೆಂಟ್ ಮಾಡಿ ಸಂತೋಷ ಪಡುವವರೆ ಹೆಚ್ಚು, ಆದರೆ ಮಲ್ಪೆ ಯುವಕರ ತಂಡ ಇದಕ್ಕೆ ತದ್ವಿರುದ್ಧ ಎಂಬಂತೆ ನಡೆದು ಊರಿನ ಜನರಿಂದ ಶಬ್ಬಾಷ್ ಗಿರಿ ಪಡೆದುಕೊಂಡಿದ್ದಾರೆ.


ಕಳೆದ ಕೆಲವು ಸಮಯಗಳಿಂದ ಮಲ್ಪೆಯ ರಾಷ್ಟ್ರೀಯ ಹೆದ್ದಾರಿಯ ಅಯ್ಯಪ್ಪ ಭಜನಾ ಮಂದಿರ, ಫಿಶರೀಶ್ ರಸ್ತೆ, ಬಂದರು ರಸ್ತೆಗಳಲ್ಲಿ ಉಂಟಾದ ಬೃಹತ್ ಹೊಂಡಗಳಿಂದ ದಿನ ನಿತ್ಯ ಎಂಬಂತೆ ವಾಹನ ಅಪಘಾತ ಉಂಟಾಗುತ್ತಿತ್ತು.ಹೆದ್ದಾರಿ ಇಲಾಖೆಯಾಗಲಿ ,ನಗರ ಸಭೆಯಾಗಲಿ ಇದನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗದ ಕಾರಣ ಮಲ್ಪೆ ಕನ್ನಿ ಪಾರ್ಟಿ ಮೀನುಗಾರರ ಸಂಘದ 20 ಕ್ಕೂ ಹೆಚ್ಚು ಸದಸ್ಯರು ಇಂದು ರಸ್ತೆಯ ಗುಂಡಿಗಳನ್ನು ಮುಚ್ಚಿ ಸ್ಥಳೀಯರ ಪ್ರೀತಿಗೆ ಪಾತ್ರರಾದರು.

ಸುಮಾರು 3 ಲೋಡು ಜಲ್ಲಿ ಮಿಶ್ರರಣ ಹಾಕಿ ಬೃಹತ್ ಗುಂಡಿಗಳನ್ನು ಮುಚ್ಚಿದ್ದಾರೆ. ಕನ್ನಿ ಪಾರ್ಟಿ ಸಂಘದವರಿಗೆ ಮಲ್ಪೆ ಟೆಂಪೋ ಚಾಲಕರ ಸಂಘದ ಸದಸ್ಯರು ಸಹಕಾರ ನೀಡಿದ್ದಾರೆಂದು ದಯಾಕರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!