ತಿಮ್ಮಪ್ಪ ಹೋಟೆಲ್ ನಲ್ಲಿ ಮಾಂಜಿ ಸವಿದ ಡಾ.ಬಿ.ಆರ್.ಶೆಟ್ಟಿ

ಉಡುಪಿ: ಅನಿವಾಸಿ ಉದ್ಯಮಿ ಉಡುಪಿ ಮೂಲದ ಬಿ.ಆರ್.ಶೆಟ್ಟಿ ಇಂದು ಮಧ್ಯಾಹ್ನ ಸಾಮನ್ಯರಂತೆ ಆದಿವುಡುಪಿಯ ಹೆಸರಾಂತ ಹೋಟೆಲ್‌ನಲ್ಲಿ ಊಟ ಮಾಡಿ ಅಚ್ಚರಿ ಮೂಡಿಸಿದರು.


ವಿದೇಶದಲ್ಲಿ 13 ಕ್ಕೂ ಹೆಚ್ಚು ಹೆಸರಾಂತ ಎನ್.ಎಮ್.ಸಿ ಹೆಲ್ತ್ ಆಸ್ಪತ್ರೆಗಳ ಒಡೆಯರಾಗಿರುವ ಡಾ.ಬಾವಗುತ್ತು ರಘರಾಮ ಶೆಟ್ಟಿ (ಬಿ.ಆರ್.ಶೆಟ್ಟಿ) ಯು.ಎ.ಇ ರಾಷ್ಟ್ರದ ಅತ್ಯಂತ ಶ್ರೀಮಂತರ 100 ಮಂದಿ ಉದ್ಯಮಿಗಳ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಬಿಲಿಯೇನಿಯರ್ ಇಂದು ತಾನು ಹುಟ್ಟಿ ಬೆಳೆದ ಊರಿನ ಸಾಮಾನ್ಯ ಹೋಟೆಲೊಂದರಲ್ಲಿ ಊಟ ಮಾಡಿ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸುವಂತೆ ಮಾಡಿದರು.


ಉಡುಪಿಯಿಂದ ಮಲ್ಪೆ ಕಡೆ ಹೋಗುವಾಗ ಆದಿವುಡುಪಿ ಹೋಗುವಾಗ ಎಡ ಬದಿಯಲ್ಲಿ ಇರುವ ತಿಮ್ಮಪ್ಪ ಹೋಟೆಲ್ ಗೆ ಹೋಗಿ ಸಾಮಾನ್ಯರಂತೆ ಹೋಗಿ ಊಟ ಕೂತ ಬಿ.ಆರ್.ಶೆಟ್ಟಿ ಅಲ್ಲಿ ಫಿಶ್ ಕರಿ ಊಟದೊಂದಿಗೆ ಪಾಪ್ಲೆಟ್, ಸಿಗಡಿ ಸುಕ್ಕ ,ಕಾಣೆ ಮೀನು ಫ್ರೈ ಸವಿದು ತನ್ನೂರಿನಲ್ಲಿ ಸಿಕ್ಕ ಅತೀಯಾದ ರುಚಿಯಾದ ಮೀನಿನ ಖಾದ್ಯ ಸವಿದು ಅಂಗಡಿ ಮಾಲೀಕರಿಗೆ ಶಬ್ಬಾಸ್ ಗಿರಿಕೊಟ್ಟರು.


ಇದೇ ರೀತಿ ಹೋಟೆಲ್‌ನ ಶುಚಿ, ರುಚಿ ಮುಂದುವರಿಸಿಕೊಂಡು ಹೋಗಿ ಎಂದು ಸಲಹೆ ನೀಡಿದರು. ಪ್ರತಿ ನಿತ್ಯ ಜನ ಜಂಗುಳಿಯಿಂದ ಇರುವ ಹೋಟೆಲ್‌ನಲ್ಲಿ ಇಂದು ಬಿಲಿಯೆನರ್ ಬಂದು ಊಟ ಮಾಡಿ ಹೋದ ಖುಷಿಯಲಿದ್ದರು ಹೋಟೆಲ್ ಮಾಲೀಕರು.
ಹೋಟೆಲ್ ವ್ಯಾಪಾರ ನೋಡಿದ ಶೆಟ್ಟರು ಹೋಟೆಲ್‌ನ ಕ್ಯಾಸ್ ಕೌಂಟರ್ ನಲ್ಲಿ ಕೂತು ಗ್ರಾಹಕರು ನೀಡುವ ಹಣವನ್ನು ಸ್ವೀಕರಿಸಿ ತಾವು ಹುಟ್ಟಿ ಬೆಳೆದ ಊರಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!