ಶಾಸಕರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ

ಬ್ರಹ್ಮಾವರ: ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮವು ಬ್ರಹ್ಮಾವರದ ಶಾಸಕರ ಕಚೇರಿಯಲ್ಲಿ ಇಂದು ನಡೆಯಿತು. ಈ ಸಂದರ್ಭ ಬ್ರಹ್ಮಾವರ ತಾಲೂಕಿನ 11 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.

ಇಬ್ಬರಿಗೆ ಪ್ರಾಕೃತಿಕ ವಿಕೋಪ ಪರಿಹಾರದಿಂದ ಎರಡು ಸಾವಿರದ ನೂರರಂತೆ ಚೆಕ್ ವಿತರಿಸಲಾಯಿತು. ಹಾಗೂ ವಿದ್ಯುತ್ ತಂತಿ ತುಂಡಾಗಿ ಗೋವು ಅಸುನೀಗಿದ ಬಗ್ಗೆ ಫಲಾನುಭವಿಗೆ ಮೆಸ್ಕಾಂ ವತಿಯಿಂದ ರೂ 5೦,೦೦೦ ಪರಿಹಾರದ ಚೆಕ್ಕನ್ನು ಶಾಸಕರಾದ ರಘುಪತಿ ಭಟ್ ವಿತರಿಸಿದರು.

ಬಳಿಕ ಶಾಸಕರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು, ತಾಲೂಕು ಪಂಚಾಯತ್ ಅಧ್ಯಕ್ಷರು, ತಾಲೂಕು ಪಂಚಾಯತ್ ಸದಸ್ಯರು, ತಹಸಿಲ್ದಾರರು ಬ್ರಹ್ಮಾವರ, ಕಂದಾಯ ಪರಿವೀಕ್ಷಕರು ಬ್ರಹ್ಮಾವರ, ಮೆಸ್ಕಾಂ ಅಧಿಕಾರಿಗಳು ಹಾಗೂ ಸ್ಥಳೀಯ ನಾಯಕರು ಈ ಸಂದರ್ಭದ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!