ಮೂಡನಿಡಂಬೂರಿನಲ್ಲಿ ಕೃತಕ ನೆರೆ

ಉಡುಪಿ: ನಗರಸಭೆ ಸರಿಯಾಗಿ ಹೂಳೆತ್ತದ ಪರಿಣಾಮ ಬನ್ನಂಜೆಯ ಗರಡಿ ಸೇತುವೆಯ ಕೆಳಭಾಗದಲ್ಲಿ ಕಸ ಕಡ್ಡಿ ಹಾಗೂ ಮರದ ದಿಂಡುಗಳು ಸೇರಿಕೊಂಡಿದೆ.

ನಿನ್ನೆ ಸುರಿದ ಭಾರಿ ಮಳೆಗೆ ನೀರು ಮುಂದಕ್ಕೆ ಹರಿಯದೇ ಕೃತಕ ನೆರೆ ಸೃಷ್ಠಿಯಾಗಿ ಶಿರಿಬೀಡು ವಾರ್ಡ್‌ನ ಮೂಡನಿಡಂಬೂರಿನಲ್ಲಿ ತಗ್ಗುಪ್ರದೇಶಗಳಿಗೆ ನೆರೆಬರುವ ಸಂಭವ ಹೆಚ್ಚಿದೆ.

ಆ ಪರಿಸರದ ಜನ ಹೆಚ್ಚು ತೊಂದರೆ ಅನುಭವಿಸುವ ಮುನ್ನ ಶಿರಿಬೀಡುವಾರ್ಡ್ ನಗರ ಸಭಾ ಸದಸ್ಯರಾದ ಟಿ.ಜಿ ಹೆಗಡೆಯವರು ನಗರಸಭಾ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ನೀಡಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!