ಕುವೈತ್‌: ಅಪಘಾತದ ಮಗನ ಮೃತದೇಹ ತರಲು ಹಣವಿಲ್ಲದೆ ಪರದಾಟ

ಕಾರವಾರ: ವಿದೇಶದಲ್ಲಿ ಅಪಘಾತದಲ್ಲಿ ಮೃತಪಟ್ಟ ಮಗನ ಮೃತದೇಹ ತರಲು ಹಣವಿಲ್ಲದೆ ಪೋಷಕರು ಪರದಾಡುತ್ತಿದ್ದರೆ. ಕುವೈಟ್ ನಲ್ಲಿ ಅಪಘಾತವೊಂದರಲ್ಲಿರಾಬಿನ್‌ಸನ್ ರೋಸಿಯೋ ಮೃತಪಟ್ಟಿದ್ದು, ಆದರೆ ರಾಬಿನ್‌ಸನ್ ಮೃತದೇಹವನ್ನು ಕಾರವಾರಕ್ಕೆ ತರಲು ಹಣವಿಲ್ಲದೆ ತೊಂದರೆ ಅನುಭವಿಸುತ್ತಿದ್ದು, ತಮ್ಮ ಪುತ್ರನ ಶವವನ್ನು ತರಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.


ಭಾನುವಾರ ಕುವೈತ್‌ನ ದಜೀಜ್ ಪ್ರದೇಶದಲ್ಲಿರುವ ಕುವೈತ್ ಫುಡ್ ಕಂಪನಿಗೆ ಕೆಲಸಕ್ಕೆ ತೆರಳುತ್ತಿರುವಾಗ ಕಿಂಗ್ ಅಬ್ದುಲ್ ಅಜೀಜ್ ರಸ್ತೆಯಲ್ಲಿ ಮೂರು ವಾಹನಗಳು ಪರಸ್ಪರ ಡಿಕ್ಕಿಯಾಗಿತ್ತು. ಈ ಸಂದರ್ಭ ರಾಬಿನ್‌ಸನ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬದವರಿಗೆ ತೊಂದರೆಯಾಗಿದೆ. ಸದ್ಯ ಈ ಬಗ್ಗೆ ಅವರು ಜಿಲ್ಲಾಡಳಿತ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಅವರು, ಈಗಾಗಲೇ ರಾಬಿನ್‌ಸನ್ ಅವರ ಸಂಬಂಧಿಕರು ಮನವಿ ಮಾಡಿಕೊಂಡಿದ್ದಾರೆ. ಕುವೈತ್‌ನಲ್ಲಿ ನಮ್ಮ ಸಂಬಂಧಿಕರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸರ್ಕಾರದ ವತಿಯಿಂದ ಸಹಕರಿಸಬೇಕು ಎಂದು ಕೇಳಿಕೊಂಡಿದ್ದಾರೆ. ನಾನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮೃತದೇಹ ಭಾರತಕ್ಕೆ ಹಸ್ತಾಂತರಿಸಲು ಏನು ಕ್ರಮ ಬೇಕು ಅದಕ್ಕೆ ಸಹಕರಿಸಿ ಎಂದು ಪತ್ರ ಬರೆದಿದ್ದಾಗೆ ಡಿಸಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!